Sunday, December 29, 2019

ஶ்ரீரங்கமஹாகுரு - 50 (Sriranga Mahaguru - 50)

ஶ்ரீகுருவின் கண்ணோட்டம் – 39

குயவனுக்கு வருடம்  கொம்புக்கு நிமிடம்
===========================================================
மூலம்: வரததேசிகாசார்யர் 
தமிழாக்கம்: ஜானகி



அனைவருக்கும் நீராட உதவும் வண்ணம் நல்ல மனம் படைத்த பலரும் ஒன்று கூடி ஆற்றங்கரையில் படிக்கட்டுகளை கட்டுவித்தனர்.அவ்வாறு கட்ட சில வருடங்கள் ஆயிற்று.அது நூற்றுக்கணக்கானோரின் நல்ல உள்ளம்,பணம்,உடல் உழைப்பு, புத்தியினால் உருவானது.

மழை பெய்ததால் அப்படிக்கட்டுகளின் சில இடங்களில் சேறும் சகதியும் ஆயிற்று.மாலை வேளையில் அங்கு நடமாட வந்த சிலர் அதை கவனியாமல் மிதித்து வழுக்கி விழுந்தனர்.அது கவலைப்பட வேண்டிய ஓர் விஷயம் என்பது சரி.ஆனால் அதற்கும் மீறி கவலைப்படும் ஓர் நிகழ்வு அங்கு நடந்தேறியது.

வழுக்கி விழுந்த சிலர் கோபம் கொண்டு ஒன்று கூடினர்.இப்படிக்கட்டுகளினால் வழுக்கி விழுந்து இன்னும் பலருக்கு கால்முறிவு,அல்லது உயிர் நீங்குவதும் ஏற்பட வாய்ப்பு உண்டு.எனவே படிக்கட்டுகளே தேவையில்லை என உடைத்து எறிந்தனர் . அவ்விடத்தில் புதிதாக படிக்கட்டுகள் கட்டும் பணியையும் மேற்கொள்ளவில்லை.படிக்களில்லாத அவ்விடத்தில் வேறு சிலர்  இறங்கி ஆற்றில் விழுந்து ஆபத்துக்குள்ளாயினர்.

ஆலயம்,தர்மசத்திரம், மருத்துவமனை முதலிய நிறுவனங்களையும் கட்டிடங்களையும் இடித்து தள்ள வேண்டும் என கிளம்புவர்கள் மேற்கூறிய கதையினால் பாடம் கற்க வேண்டும்.அவைகளை அழிப்பது மிகவும் சுலபம்.ஆனால் கட்டுவது மிகவும் கடினம்.கோவத்தில் வெட்டப்பட்ட மூக்கு அமைதியில் மீண்டும் வருவதில்லை."குயவனுக்கு வருடம், கொம்புக்கு நிமிடம்" எனும் பழமொழி இதையே உணர்த்துகிறது.உலக நன்மைக்கு பயன்படும் அந்நிறுவனங்களில் ஏதாவது பாகங்கள் பழுது அடைந்தாலும் அதை சீர் செய்பவர்கள்தான் விவேகிகள்.
                  
                           (அடுத்த வியாழனன்று தொடரும்)

ಭಗವಂತನು ನಮಗೇಕೆ ಕಾಣಿಸುವುದಿಲ್ಲ? (Bhagavanthanu namageke kanisuvudilla?)

ಲೇಖಕರು:   ಶ್ರೀನಿವಾಸ ಅಯ್ಯಂಗಾರ್
B.Sc., B.L., G.D.C.S., F.C.S
(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀ ಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ - "ಎಲೈ ಅರ್ಜುನ ! ಎಲ್ಲಭೂತಗಳನ್ನು ಮಾಯೆಯಿಂದ ತಿರುಗಿಸುತ್ತಿರುವ ಈಶ್ವರನು ಸರ್ವಭೂತಗಳ ಹೃದಯದಲ್ಲಿಯೂ ಇರುವನು " ಎಂದು ಹೇಳುತ್ತಾನೆ. ಹಾಗಂದಮೇಲೆ -ನಮ್ಮೆಲ್ಲರ ಹೃದಯದಲ್ಲಿಯೂ ಭಗವಂತನು ಇದ್ದಾನೆ ಎಂದಾಯಿತು. ಹೃದಯವು ನಮ್ಮೆಲ್ಲರಲ್ಲಿಯೂ ಇದೆ. ಹೃದಯದಲ್ಲಿರುವ ಭಗವಂತನನ್ನು ಹೇಗೆನೋಡುವುದು? ಹೃದಯವು ದೇಹದ ಒಳಗಡೆ ಇದೆ. ಕಣ್ಣು  ಹೊರಗಿದೆ! ಹಾಗಾದರೆ ಹಾರ್ಟ್ ಆಪರೇಷನ್ ಮಾಡುವ ವೈದ್ಯರಿಗೂ ಕಾಣಿಸುವುದಿಲ್ಲವಲ್ಲ !!

ಅನುಭವಿಗಳು ವರ್ಣಿಸಿದಂತೆ, ನಮ್ಮ ಶರೀರವು ಒಂದು ರಥ. ಇದಕ್ಕೆ ನರ ರಥವೆಂದು ಹೆಸರು. ನರ ಎಂದರೆ ಜೀವ. ಈ ರಥದಲ್ಲಿ ನರರಿಗೆ ಅಯನನಾಗಿ, ಗುರಿಯಾಗಿ, ನೆಲೆಯಾಗಿರುವ ನಾರಾಯಣನೂ ಉಂಟು. ಹೃದಯ ಸ್ಥಾನವು ಜೀವ ದೇವರ ಸಂಧಿಸ್ಥಾನ. ಮಾನವನ ದೇಹದಲ್ಲಿ 'ಜೀವ-ದೇವರು ಇದ್ದಾರೆ' ಎಂದರೆ ಹೇಗೆಒಪ್ಪುವುದು? ನಮ್ಮೊಳಗೇ ಇರುವ ಪರಮಾತ್ಮನು ನಮಗೇಕೆ ಕಾಣುತ್ತಿಲ್ಲ ಎಂದರೆ - ನಾವು ಅತ್ತಕಡೆ ಲಕ್ಷ್ಯ ನೀಡುತ್ತಿಲ್ಲ. ಇದಕ್ಕೆ ಒಂದು ಒಳ್ಳೆಯ ಉದಾಹರಣೆಯನ್ನು ಶ್ರೀರಂಗಮಹಾಗುರುಗಳು ಕೊಡುತ್ತಾರೆ. ಮನುಷ್ಯ ಅನ್ಯಕಾರ್ಯಮಗ್ನನಾಗಿದ್ದಾಗ ಲಕ್ಷ್ಯನೀಡದಿದ್ದರೆ ಮನುಷ್ಯ ಸಹಜವಾದಹಸಿವು -ನಿದ್ರೆಗಳೂ ಮರೆಯಾಗುವುದುಂಟು. ಮಾತಿನ ನಡುವೆಯೇ, ಕಾರ್ಯಾಂತರದಲ್ಲಿ ಮಗ್ನನಾಗಿದ್ದಾಗಲೇ ಮನುಷ್ಯನಿಗೆ ಹಸಿವು ಸೂಚನೆಯನ್ನು ಕೊಡುವುದುಂಟು. ಆದರೆ ಅದನ್ನು ಇತರ ವೇಗಗಳಿಗೆ ವಶನಾಗಿ ಗಮನಿಸುವುದಿಲ್ಲ. ಅಥವಾ ತಿಳಿದರೂ ನಿರ್ಲಕ್ಷಿಸುತ್ತಾನೆ. ಸೆಕೆಂಡ್ -ಷೋ ಸಿನಿಮಾಗೆ ಹೋದಾಗ ರಾತ್ರಿ-ನಿದ್ರೆ ಕಣ್ಣೆಳೆಯುತ್ತೆ. ಆದರೆ ಅವನು ಅದನ್ನು ಉಪೇಕ್ಷಿಸುತ್ತಾನೆ. ಹೀಗೆಯೇ ಅಭ್ಯಾಸ ಮಾಡಿಬಿಟ್ಟರೆ ಹಸಿವೇ ಮುಚ್ಚಿ ಹೋಗುತ್ತದೆ.
   
 ಹೀಗೆನಾವು ಇಂದ್ರಿಯಗಳು ಏನನ್ನು ಕೇಳುತ್ತದೆಯೋ ಅದನ್ನು ಕೊಟ್ಟುಬಿಡುತ್ತೇವೆ. ಅವುಗಳ ವೇಗದಲ್ಲಿ ಆತ್ಮನ ಹಸಿವನ್ನು ಮರೆಯುತ್ತಿದ್ದೇವೆ. ಆದುದರಿಂದ ಭಗವಂತನು ನಿಶ್ಚಿತವಾಗಿ ನಮ್ಮೊಳಗಿದ್ದರೂ ನಮಗೆ ಕಾಣಿಸುವುದಿಲ್ಲ. ಆದ್ದರಿಂದಲೇ ನಮ್ಮ ಮಹರ್ಷಿಗಳು ಭಗವಂತನಕಡೆಗೆ ನಮ್ಮ ಲಕ್ಷ್ಯವನ್ನು ತಿರುಗಿಸುವುದಕ್ಕಾಗಿ ಭಾರತ ಭೂಮಿಯಲ್ಲಿ ಗುಡಿ ಗೋಪುರಗಳನ್ನು ನಿರ್ಮಾಣ ಮಾಡಿದರು. ಪ್ರತಿಯೊಂದು ಮನೆಯಲ್ಲಿಯೂ ೧೬ ಸಂಸ್ಕಾರಗಳು ನೆಡೆಯಲು ಏರ್ಪಾಡು ಮಾಡಿದರು. ಜೀವಿಗಳ ಅನುಕೂಲ ಸಂಪಾದನೆಗಾಗಿ ಮತ್ತು ಪ್ರತಿಕೂಲ ನಿವಾರಣೆಗಾಗಿ ವಿಧಿ ನಿಷೇಧಗಳನ್ನು ತಂದರು.

 ಒಂದು ಮಗುವು ಹುಟ್ಟಿದೊಡೆನೆಯೇ ಊರ್ದ್ವ ತ್ರಿಕೋಣದಲ್ಲಿರುವ ದೀಪವನ್ನು ತೋರಿಸುತ್ತಿದ್ದರು. ಘಂಟಾನಾದವನ್ನು ಮಾಡುತ್ತಿದ್ದರು. ಹೀಗೆ ಜ್ಯೋತಿ-ನಾದಗಳತ್ತ ಲಕ್ಷ್ಯವು ಉಂಟಾಗುವಂತೆ ಮಾಡಿ ಜೀವನದ ಉದ್ದಕ್ಕೆ ಭಗವಂತನತ್ತ ಮನೋಧಾರೆಯು ಹರಿಯುವಂತೆ ಜೀವನವನ್ನು ಅಳವಡಿಸಿದ್ದರು. ಈಗ ಅವೆಲ್ಲಾ ಮರೆಯಾಗಿದೆ. ಭಗವಂತನೂ ಮರೆಯಾಗಿದ್ದಾನೆ.
ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ-“ಎಚ್ಚರ, ಕನಸು, ನಿದ್ರೆಗಳು, ಹೇಗೆ ಜೀವನಿಗೆ ಸಹಜಸಿದ್ಧವಾದ ಹಕ್ಕೋ ಹಾಗೆಯೇ ಸುಖವಾಗಿ ಭಗವಂತನ ಜೊತೆಯಲ್ಲಿರೋಣ ಎನ್ನುವುದೂ ಜೀವನದ ಹಕ್ಕು”.

ನಾವೆಲ್ಲರೂ  ಭಗವಂತನನ್ನು ಕಂಡು ಅನುಭವಿಸಿ ನಲಿಯುವಂತೆ ಆ ಸರ್ವೇಶ್ವರನು  ಅನುಗ್ರಹಿಸಲಿ.  

ಸೂಚನೆ:  29/12/2019 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

ಕಂಬಳಿಯನ್ನು ಕೈಬಿಡು (Kambaliayannu kaibidu)

(ಪ್ರತಿಕ್ರಿಯಿಸಿರಿ lekhana@ayvm.in)


ಹಳ್ಳಿಯಲ್ಲಿ ಅಗಸನೊಬ್ಬನು ಬಟ್ಟೆಗಳನ್ನು ತೆಗೆದುಕೊಂಡು ಒಗೆಯಲು ಹೊಳೆಗೆ ಹೋಗುತ್ತಿದ್ದ. ಒಂದು ದಿನ ಪ್ರವಾಹದಲ್ಲಿ ಕೈಜಾರಿ ಒಂದು ಕಂಬಳಿ ಕೊಚ್ಚಿಕೊಂಡುಹೋಯಿತು. ಅಯ್ಯೋ ಹೋಯಿತಲ್ಲಾ ಎಂದು ಹೊಳೆಗೆ ದುಮುಕಿ ಕಂಬಳಿಯನ್ನು ಹಿಂಬಾಲಿಸಿ ಹಿಡಿದೇಬಿಟ್ಟ. ಆದರೆ ಪ್ರವಾಹದ ವೇಗ ಮಿತಿ ಮೀರಿದ್ದರಿಂದ ಕಂಬಳಿ ಸಮೇತ ಇವನನ್ನೂ ಎಳೆದುಕೊಂಡು ಹೋಗುತ್ತಿತ್ತು. ಕಂಬಳಿಯೋ ಪ್ರಾಣವೋ ಎಂಬ ಪ್ರಶ್ನೆ! ಕಂಬಳಿಯನ್ನು ಕೈಬಿಟ್ಟರೇನೆ ದಡ ಸೇರಲಾದೀತು. ದಡದಲ್ಲಿನ ಹಿತೈಷಿಗಳು ಕಂಬಳಿ! ಕಂಬಳಿ! ಎಂದರಚುತಿದ್ದವರು - ಬಿಟ್ಟುಬಿಡು; ದಡಸೇರಿಕೋ ಎಂದು ಕಿರಿಚತೊಡಗಿದರು. ಅಗಸ ಹೇಳಿದ - ನಾನೂ ಅದನ್ನೇ ಪ್ರಯತ್ನಪಡುತ್ತಿದ್ದೇನೆ ಆಗಲಿಂದಲೂ! ಆದರೆ ನಾನು ಬಿಟ್ಟರೂ ಅದು ನನ್ನನ್ನು ಬಿಡುತ್ತಿಲ್ಲವಲ್ಲಾ! ಏನು ಮಾಡಲಿ?! ಏಕೆಂದರೆ ಅವನು ಹಿಡಿದದ್ದು ಕಂಬಳಿಯನ್ನಲ್ಲ, ಒಂದು ಕರಡಿಯನ್ನು!! ಇವನು ಬಿಟ್ಟರೂ ಅದು ಇವನನ್ನು ಬಿಡುತ್ತಿಲ್ಲ ಎಂಬ ದುಃಸ್ಥಿತಿ!!

ಅಗಸನ ಪರಿಸ್ಥಿತಿ ಏನಾಯಿತೋ ತಿಳಿಯದು! ಆದರೆ ನಾವೂ ಜೀವನದ ಹೊಳೆಯಲ್ಲಿ ಸಿಲುಕುವುದು ದಿಟ. ಕೆಲವೊಮ್ಮೆ ಗುರಿಯನ್ನು ಮರೆತು ಯಾವ ಯಾವುದನ್ನೋ ಹಿಂಬಾಲಿಸುತ್ತಲೇ ಕಾಲ ಕಳೆಯುತ್ತೇವೆ. ನೆರೆ-ಹೊರೆಯವರೂ ಅದಕ್ಕೆ ಸೊಪ್ಪನ್ನು ಹಾಕಿ ಬೆಳೆಸಿಯಾರು. ಮತ್ತೊಂದು ಕಡೆ ಹಿತೈಷಿಗಳ ಮಾತುಗಳೂ ಹಿಡಿಸದು. ಕ್ರಮೇಣ ಜೀವನದಲ್ಲಿ ಸುಳಿಗಳಂತಿರುವ ಘಟನೆಗಳು ಸಂಭವಿಸಿದಾಗ ಎಚ್ಚೆತ್ತುಕೊಂಡರೂ ಕರಡಿಯಂತೆ ಅವು ನಮ್ಮನ್ನು ಬಿಡಲೊಲ್ಲವು! 

ಇಂತಹ ಪರಿಸ್ಥಿತಿಗೆ ತುತ್ತಾಗದಿರಲು ಜೀವನದ ಗುರಿಯನ್ನೂ ಅದನ್ನು ಸಾಧಿಸುವ ಹೆದ್ದಾರಿಯನ್ನೂ ಅರಿಯಲೇಬೇಕು. ಅಂತಹ ಮಾರ್ಗವನ್ನು ತಪಸ್ಯೆಯಿಂದ ಅನ್ವೇಷಿಸಿ-ಅರಿತು ಪರಮಕರುಣೆಯಿಂದ ನಮ್ಮ ಮಹರ್ಷಿಗಳು ಉಪದೇಶಿಸಿದರು. ಧರ್ಮ-ಅರ್ಥ-ಕಾಮ-ಮೋಕ್ಷವೆಂಬ ಚತುರ್ಭದ್ರಮಯವಾದ ಜೀವನವೇ ಆ ಹೆದ್ದಾರಿ ಎಂದು ಸಾರಿದರು. ಕೇವಲ ಅರ್ಥ-ಕಾಮಗಳನ್ನೇ ಅವಲಂಬಿಸಿದರೆ ಆರಂಭದಲ್ಲಿ ಕಂಬಳಿಯಾಗಿ ಕಾಣಿಸಿ, ಕ್ರಮೇಣ ಅದೇ ಕರಡಿಯಾಗುವುದು ನಿಸ್ಸಂಶಯ. ಆದರೆ ಮೋಕ್ಷವನ್ನೇ ಧ್ಯೇಯವಾಗಿಸಿಕೊಂಡರೆ ದಡಸೇರುವುದು ನಿಶ್ಚಯ. ಅಂದಮಾತ್ರಕ್ಕೆ ಜೀವನದಲ್ಲಿ ಅರ್ಥ-ಕಾಮಗಳು ಬೇಡವೇಬೇಡ ಎಂದೇನಲ್ಲ. ಅವುಗಳನ್ನು ಧರ್ಮದ ಜೊತೆಯಲ್ಲಿ ಸೇವಿಸಿದರೆ ಕಂಬಳಿಯೂ ಸಿಗುವುದು ಕರಡಿಯ ಹಿಂಸೆಯೂ ಕಾಣದು ಎಂಬಂತೆ ಐಹಿಕ ಸುಖವನ್ನೂ ದೊರಕಿಸಿ ಮೋಕ್ಷದ ಕಡೆಯೂ ಒಯ್ಯುವುದು. “ತುಂಟ ಹಸುವಿನಂತಹ ಅರ್ಥ-ಕಾಮಗಳನ್ನು ಧರ್ಮ-ಮೋಕ್ಷಗಳ ಹದ್ದು-ಬಸ್ತಿನಲ್ಲಿ ಇಟ್ಟುಕೊಂಡರೆ ಅಮೃತವನ್ನೇ ಕರೆಯಬಹುದು” ಎಂಬ ಯೋಗಿವರೇಣ್ಯರಾದ ಶ್ರೀರಂಗಮಹಾಗುರುವಿನ ನುಡಿಮುತ್ತನ್ನು ಇಲ್ಲಿ ಸ್ಮರಿಸೋಣ.   

ಸೂಚನೆ:  28/12/2019 ರಂದು ಈ ಲೇಖನವು ಉದಯವಾಣಿ ಮಹರ್ಷಿ ಬೆಳಕು ಅಂಕಣದಲ್ಲಿ ಪ್ರಕಟವಾಗಿದೆ.

ಲೇಪಾಕ್ಷಿಯ ಅದ್ಭುತಗಳು (Lepaakshiya adbhuthagalu)

ಲೇಖಕರು:  ಮೈಥಿಲೀ ರಾಘವನ್  
(ಪ್ರತಿಕ್ರಿಯಿಸಿರಿ lekhana@ayvm.in)

ಶ್ರೀರಾಮ, ಶ್ರೀಕೃಷ್ಣ ಮುಂತಾದ ಅವತಾರ ಪುರುಷರು ಹುಟ್ಟಿ ಬೆಳೆದು ನಡೆದಾಡಿ ಪಾವನಗೊಳಿಸಿದ ಭವ್ಯಭೂಮಿ ಭಾರತಭೂಮಿ. ಶ್ರೀರಾಮನು ವನವಾಸದ ಕಾಲದಲ್ಲಿ ಭಾರತಭೂಮಿಯ ಅನೇಕ ಜಾಗಗಳನ್ನು ತನ್ನ ಪಾದಸ್ಪರ್ಶದಿಂದ ಪವಿತ್ರಗೊಳಿಸಿದ್ದಾನೆ. ಅಂತಹ ಜಾಗಗಳಲ್ಲಿ ಲೇಪಾಕ್ಷಿ ಎಂಬ ಸ್ಥಳವೂ ಒಂದಾಗಿದೆ. ಶ್ರೀರಾಮನ ವನವಾಸ ಸಂದರ್ಭದಲ್ಲಿ ಸೀತಾಮಾತೆಯನ್ನು ರಾವಣಾಸುರನು ಎತ್ತಿಕೊಂಡೊಯ್ದದ್ದು ಪ್ರಸಿದ್ಧವಾಗಿದೆ. ಆ ಸಮಯದಲ್ಲಿ ಜಟಾಯುವೆಂಬ ಪಕ್ಷಿರಾಜನು ರಾವಣನನ್ನೆದುರಿಸಿ ಸೀತೆಯನ್ನು ಕಾಪಾಡುವ ಪ್ರಯತ್ನದಲ್ಲಿ ವಿಫಲನಾಗಿ ಅಸುನೀಗಿದನು. ಸೀತಾಮತೆಯನ್ನು ಅರಸುತ್ತ ಬಂದ ರಾಮಚಂದ್ರನು ರಾವಣನಿಂದ ಹೊಡೆದುಬೀಳಿಸಲ್ಪಟ್ಟ ಜಟಾಯುವನ್ನು ಕಂಡದ್ದು ಇಂದಿನ ಲೇಪಾಕ್ಷಿಸ್ಥಳದಲ್ಲಿ ಎಂಬ ಪ್ರತೀತಿ ಇದೆ. ಜಟಾಯುವನ್ನು ಕಂಡ ರಾಮ “ಲೇ ಪಕ್ಷಿ”(ಏಳು, ಓ ಹಕ್ಕಿಯೇ) ಎಂದು ಕರುಣೆಯಿಂದ ಅದನ್ನು ಸಂಭೋದಿಸಿದನಂತೆ. ಆದ್ದರಿಂದ ಈ ಸ್ಥಳಕ್ಕೆ ಲೇಪಾಕ್ಷಿಯೆಂದು ಹೆಸರು ಎಂಬುದಾಗಿ ತಿಳಿದುಬರುತ್ತದೆ. ಶ್ರೀರಾಮನು ಜಟಾಯುವಿಗೆ ಮೋಕ್ಷವನ್ನು ಅನುಗ್ರಹಿಸಿದನೆಂದು ಶ್ರೀಮದ್ರಾಮಾಯಣವು ತಿಳಿಸುತ್ತದೆ. ಆದ್ದರಿಂದ ಇದನ್ನು ಜಟಾಯುಮೋಕ್ಷಸ್ಥಾನವೆಂದೂ ಕರೆಯುತ್ತಾರೆ.




ಬೆಂಗಳೂರಿನಿಂದ 135 ಕಿ.ಮಿ ದೂರದಲ್ಲಿ ಆಂದ್ರಪ್ರದೇಶದಲ್ಲಿರುವ ಈ ಚಿಕ್ಕ ಹಳ್ಳಿಯು ತೀರ್ಥಯಾತ್ರೆ ಹಾಗೂ ಉಲ್ಲಾಸ ಪ್ರವಾಸ ಎರಡಕ್ಕೂ ಹೊಂದುವ ಜಾಗವಾಗಿದೆ. ಈ ಸ್ಥಳವು ಸ್ಕಾಂದಪುರಾಣದಲ್ಲೂ ಶೈವರ ದಿವ್ಯಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿದೆ. ಕಾರು ಅಥವ ಟಾಕ್ಸಿಯಲ್ಲಿ ಸುಮಾರು 3 ಘಂಟೆಗಳಕಾಲದ ಪ್ರಯಾಣ. ಅಲ್ಲಿನ ವಿರೂಪಾಕ್ಷ ದೇವಾಲಯವು ಅಚ್ಯುತರಾಯನ ಕಾಲದಲ್ಲಿ ಕಟ್ಟಲ್ಪಟ್ಟು ಅದ್ಭುತ ಶಿಲ್ಪಗಳ ನೆಲೆವೀಡಾಗಿದೆ. ಇದು ವಿಜಯನಗರ ಶೈಲಿಯಲ್ಲಿ ರಚಿಸಲ್ಪಟ್ಟಿದೆ. ದೇವಾಲಯದ ಪ್ರಾಕಾರಗಳು ಅತ್ಯಂತ ಉನ್ನತ ಮಟ್ಟದ ಕಲಾನೈಪುಣ್ಯವನ್ನು ಪ್ರದರ್ಶಿಸುವ ಸ್ಥಂಭಗಳಿಂದ ಅಲಂಕೃತವಾಗಿವೆ. ಒಳಚಾವಣಿಯೂ ಕೂಡ ಸುಂದರವಾದ ಚಿತ್ರಗಳಿಂದ ಕೂಡಿದೆ. ದೇವಾಲಯದ ಮಂಟಪದಲ್ಲಿ ಅದ್ಭುತಕೆತ್ತನೆಗಳಿಂದ ಕೂಡಿದ 64 ಸ್ಥಂಭಗಳಿವೆ. ಅವುಗಳಲ್ಲಿ ಒಂದು ಸ್ಥಂಭವು ನೆಲದಿಂದ ಸ್ವಲ್ಪಮೇಲಕ್ಕೇ ನಿಂತಿದೆ. ಅಡಿಯಲ್ಲಿ ಒಂದು ಬಟ್ಟೆ ಅಥವ ಕಾಗದವನ್ನು ಅದರ ಅಡಿಯಿಂದ ತೂರಿಸಿ ಮತ್ತೊಂದು ಬದಿಯಿಂದ ಹೊರತೆಗೆಯಬಹುದಾಗಿದೆ! ಎಂತಹ ಅದ್ಭುತ ರಚನೆ! ವಿದೇಶೀಯನೊಬ್ಬನು ಆ ಕಂಭವನ್ನು ಸ್ವಲ್ಪ ಅಲ್ಲಾಡಿಸಿ ಅದು ಯಾವ ಆಧಾರದಿಂದ ನಿಂತಿದೆಯೆಂದು ನೋಡುವ ಪ್ರಯತ್ನ ಮಾಡಿದಾಗ ಅಲ್ಲಿದ್ದ ಅಷ್ಟೂ ಕಂಭಗಳೂ ಅಲ್ಲಾಡಲು ಶುರುವಾಯಿತಂತೆ! ಆತ ಗಾಬರಿಗೊಂಡು ತನ್ನ ಪ್ರಯತ್ನವನ್ನು ಬಿಟ್ಟು ಓಡಿಹೋದನಂತೆ! ಅದೆಂತಹ ಅದ್ಭುತ ಕಟ್ಟದ ನಿರ್ಮಾಣ! ಅದನ್ನು ರಚಿಸಿದ ಮಹಾನುಭಾವನನ್ನು ಅದೆಷ್ಟು ಕೊಂಡಾಡೋಣ?




ಇಲ್ಲಿರುವ ದೊಡ್ಡಲಿಂಗದ ಮೇಲೆ ಹಾವಿನ ಹೆಡೆಯು ಕೆತ್ತಲ್ಪಟ್ಟಿದೆ. ಅಷ್ಟು ದೊಡ್ಡ ಗಾತ್ರದ ಆಕೃತಿಯು ಒಂದೇ ಕಲ್ಲಿನಲ್ಲಿ ಕೆತ್ತಲ್ಪಟ್ಟಿರುವುದು ಅಚ್ಚರಿಯ ಸಂಗತಿ. ಲೇಪಾಕ್ಷಿಯ ಇನ್ನೊಂದು ಪ್ರಸಿದ್ಧ ಕಲಾಕೃತಿಯೆಂದರೆ ಒಂದೇ ಕಲ್ಲಿನಿಂದ ನಿರ್ಮಿತವಾದ ಬೃಹದಾಕಾರದ ನಂದಿ. ಇದು ಸುಮಾರು 20 ಅಡಿಗಳಷ್ಟು ಎತ್ತರ, 30 ಅಡಿಗಳಷ್ಟು ಉದ್ದದ್ದಾದ ಭವ್ಯ ಕಲಾಕೃತಿ. ನಂದಿಯ ಸುತ್ತಲೂ ದೊಡ್ಡದಾದ ಸುಂದರ ಉದ್ಯಾನವನವು ನಿರ್ಮಿತವಾಗಿದೆ. ಪ್ರವಾಸಿಗಳಿಗೆ ಅತ್ಯಂತ ಆಕರ್ಷಕ ಸ್ಥಾನ. ಇಲ್ಲಿಯ ಮತ್ತೊಂದು ವಿಶೇಷವೆಂದರೆ, ದೊಡ್ಡದಾದ ಒಂದು ಪಾದದ ಗುರುತು ಕಲ್ಲಿನ ಮೇಲೆ ಕಾಣಿಸುತ್ತದೆ. ಅದು ಸೀತಾಮಾತೆಯ ಪಾದದ ಗುರುತು ಎಂಬ ಪ್ರತೀತಿ ಇದೆ. ಇದರಲ್ಲಿ ಸದಾ ಕಾಲವೂ ನೀರು ಜಿನುಗುತ್ತಿರುತ್ತದೆ. ಬಟ್ಟೆಯಿಂದ ಒರಸಿದರೂ ಮತ್ತೆ ನೀರು ಜಿನುಗುತ್ತೆ! ನೀರು ಎಲ್ಲಿಂದ ಬರುತ್ತದೆಂಬುದೇ ಯಾರಿಗೂ ತಿಳಿದಿಲ್ಲವಂತೆ. ಹೀಗೆ ಅನೇಕ ವಿಸ್ಮಯಗೊಳಿಸುವ ಅಂಶಗಳಿಂದಲೂ ಶಿಲ್ಪಕಲಾ ವೈಭವದಿಂದಲೂ
ಮೆರೆಯುವ ಈ ಸ್ಥಳವು ಪ್ರತಿನಿತ್ಯವೂ ವಾಹನಗಳಸದ್ದು-ಗಲಾಟೆಗಳ ಮಧ್ಯದಲ್ಲಿ ಓಡಾಡಿ ತಲೆಬಿಸಿಯಾಗಿರುವ ನಗರ ವಾಸಿಗಳಿಗೆ ಪ್ರಶಾಂತವಾದ ವಾತಾವರಣವನ್ನೂ, ದೈವೀಭಾವವನ್ನೂ, ಮನೋರಂಜನೆಯನ್ನೂ, ಉಲ್ಲಾಸವನ್ನೂ ನೀಡೂವಒಳ್ಳೆಯ picnic spot  ಹಾಗೂ ತೀರ್ಥಕ್ಷೇತ್ರ ಎರಡೂ ಆಗಿದೆ.

ಸೂಚನೆ:  28/12/2019 ರಂದು ಈ ಲೇಖನವು ಉದಯವಾಣಿ ವಾರ್ತಾಪತ್ರಿಕೆಯಲ್ಲಿ 
ಪ್ರಕಟವಾಗಿದೆ.

Thursday, December 26, 2019

नारियल की महिमा (Nariyal ki mahimaa)

लेखक – तरोड़ी सुरेश
हिन्दी अनुवाद – पूजा धवन


भारतीय संस्कृति में दैनिक जीवन में उपयोग की जाने वाली कई सामग्रियों और विशेष रूप से पूजा (पूजा), त्यौहारों, समारोहों और यहां तक कि गैर-आनन्दकारी गतिविधियों पर भी महत्व देने वाले कई अनुष्ठान हैं। उपयोग की जाने वाली कई सामग्रियों में से, जो प्रत्येक अवसर पर अलग-अलग होती है, सबसे श्रेष्ट है नारियल के विभिन्न भागों का उपयोग । नारियल उस पेड़ के किसी भी हिस्से के लिए उपसर्ग बन जाता है, उदाहरण के लिए नारियल पानी, नारियल क्रीम, नारियल तेल, नारियल कॉयर, नारियल झाड़ू, आदि। हमारे देश में, नारियल और उसके विभिन्न भागों में, इसका अनूठा अर्थ है - भोजन सामग्री, दवा, दान, पूजा में प्रसाद आदि के रूप में। नारियल तीनों हो सकते हैं: एक गिरी, एक अखरोट और एक बीज। 'अखरोट' इतना लोकप्रिय है; यह किराने या सामग्री की पूजा के लिए खरीदारी करते समय एक सह-व्यापारी के रूप में प्रस्तावित हो जाता है। नारियल के 'नट' को अन्य नट्स जैसे बीटल नट, ग्राउंड नट, काजू, अखरोट आदि या अन्य फलों या सब्जियों से मिश्रित नहीं करना चाहिये । नारियल का हर भाग दैनिक जीवन में उपयोग किया जाता है। इसी कारण से, नारियल को "जीवन का वृक्ष" कहा जाता है और पेय, फाइबर, भोजन, ईंधन, बर्तन, संगीत वाद्ययंत्र और अन्य वस्तुएं पैदा कर सकता है। इस प्रकार नारियल के पेड़ को 'कल्प-वृक्ष' (कामना पूर्ण करने वाला दिव्य वृक्ष) के रूप में संदर्भित और सजाया जाता है। इसी कारण से यह सबको आश्चर्यचकित कर देता है किन्तु यह महत्वपूर्ण स्थान केवल नारियल के लिए क्यों? भारतीय पाक में नारियल खाना पकाने के लिए सर्वोत्कृष्ट सामग्री बन जाता है। यह षड्रस (छह स्वाद) के साथ बहुत अच्छी तरह से मिश्रित हो जाता है। यह सुखद है और संगत भी है। यह गुण इसे एक सार्वभौमिक घटक बनाता है। अपने सुखद और शांत गुणों के कारण नारियल का औषधीय महत्व है। यह वात और पित्त को नियंत्रित करने के लिए जाना जाता है; इसके अतिरिक्त्, जब बाहरी रूप से लागू किया जाता है, तो यह त्वचा रोगों में भी प्रभावी है। यह हमारे शरीर को सक्रिय करने के साथ-साथ मस्तिष्क के कार्यों में सुधार करने में लाभकारी है। नारियल का जल (डाब) वात निवारक होता है । यह भी संभव है कि प्रकृति में अन्य सामग्रियां भी हो सकती हैं जिनमें नारियल के समान गुण हो ।


हमारे ऋषियों ने नारियल की महानता के कई कारणों का पता लगाया है। एक कन्नड़ कहावत कहती है "तलये तेंगिनकायि नारायण, बरले बाळॆहन्नु नारायण" - जब यह दशांश होता है, तो इसका अर्थ है, सिर ही नारियल है और उंगलि ही केला । हमारे शरीर में ही नारायन हैं – वह है हमारे सिर और नारियल । हमारा सिर आत्मज्ञान का केंद्र है और इस प्रकार शरीर का सबसे महत्वपूर्ण हिस्सा है। नारियल के दो हिस्सों की तुलना मस्तिष्क के दो भागों (बाएं और दाएं) से की जाती है। ज्ञानियों ने अपनी शिखा (बालों का गुच्छा) "ज्ञानमयी शिखा" का प्रदर्शन किया । इसी तरह, नारियल के गुच्छे को उनके गुच्छे के प्रतिनिधि के रूप में देखा जा सकता है। इसके दोनों खंडों में भ्रूमध्य केंद्र (नेत्र-भौंह के बीच का योगिक केंद्र) और सहस्रार चक्र ("हजार पंखुड़ियों वाला" या मुकुट चक्र) होता है । नारियल का सार सहस्रार चक्र जैसा अत्यन्त मधुर है । आध्यात्मिक आकांक्षी इन दो आध्यात्मिक केंद्रों के बीच दिव्य लिंगाकार में समस्त विश्व के मूल का दर्शन कर सकते हैं । यह भक्ति के माध्यम से प्राप्त किया जाता है । इसी प्रकार्, नारियल अपने दो हिस्सों के बीच सुखद उत्तमांश/ मलाई और दूध रखता है । ज्ञानियों को, सामान्य के विपरीत, तीसरे नेत्र के प्रकार एक सूक्ष्म भावना होती है । यह दिव्य-ज्ञान का आधार है और गहन ध्यान की अवधि में उत्तेजना पर खुलता है। इसी के समान एक तीसरा नेत्र नारियल में भी उपलब्ध है। एक पके हुए नारियल में तीसरे नेत्र के स्थान पर, कदाचित, बीज के समान एक छोटा फूल प्रत्यक्ष हो सकता है। यह एक बाल पौधा है । इसे बड़ी श्रद्धा के साथ सिर पे रखते हैं । यह विश्व के बीजरूप लिंग का प्रतीक है | श्रीरंगमहागुरु ने स्पष्ट रूप से बताया कि निपुण आकांक्षी भ्रूमध्य केंद्र में इस बीज जैसे लिंग का दर्शन कर परमानंद का अनुभव करते हैं।

नारियल के पेड़ का प्रत्येक भाग - खोल, पत्तियां, तना, गुच्छा, फ्रैंड्स - इसे बहुमुखी और इच्छा-पूर्ण दिव्य पेड़ बनाने में उत्पादक उपयोग होता है। ऐसे एक कल्पवृक्ष का फल हैं नारियल | इसी तरह भगवान के संकल्पवृक्ष का फल होता है - चारों पुरुषार्थ | नारियल चार पुरुषार्थों (पीछे की वस्तु) - धर्म (अधिकार अनुशासन), अर्थ (सही संसाधन), काम (सही इच्छा) और मोक्ष (बंधन से मुक्ति) के लिए एक आकार है। इन पुरुषार्थों को प्राप्त करना प्रत्येक व्यक्ति का जन्म-अधिकार है। दिव्य प्रसाद से पहले नारियल फोड़ना आवश्यक है। इसी प्रकार, ध्यान में मन को भिगोने और ज्ञान प्राप्त करने के लिए सिर में स्थित सहस्रार को प्रभावित किया जाना चाहिए। ऋषियों ने घोषणा की है कि नारियल एक धन्य, देवता प्रसन्नता दिलाने वाली - दिव्य और शीघ्रफलकारी सामग्री है। लेकिन इन सब बातों से खोकला नारियल अन्वय नहीं हो जाता | यह नारियल है जो हमारे अंदर और बहार के जीवन का दर्पण है और प्रकृति का संस्करण करते हुए सर्वोपकारी है । तथा वहअपने गुणों के लिये भारतीय संस्कृति में सम्मान का स्थान प्राप्त करता है।

सूचन : इस लेख का कन्नड़ संस्करण AYVM   ब्लॉग पर देखा जा सकता है I

Tuesday, December 24, 2019

ಪಾಕ ಕಲೆಯ ನೆಲೆ (Paaka kaleya nele)

ಲೇಖಕರು:  ತಾರೋಡಿ ಸುರೇಶ
(ಪ್ರತಿಕ್ರಿಯಿಸಿರಿ lekhana@ayvm.in)


ಹಿಂದಿನ ಲೇಖನದಲ್ಲಿ ಇಂದಿನವರ ಯೋಚನೆ-ಯೋಜನೆಗಳ ಸಂಕ್ಷಿಪ್ತ ಸ್ಮರಣೆಯನ್ನು ಮಾಡಿಕೊಂಡಿದ್ದೆವು. ಅವುಗಳ ಸಮಾಧಾನಕ್ಕೆ ಬೇಕಾದ ಪೀಠಿಕೆಯನ್ನು ಕೊಡುವುದು ಈ ಪುಟ್ಟ ಲೇಖನದ ಉದ್ದೇಶವಾಗಿದೆ.

ಪಾಕ ಎಂದರೆ ಹದಗೊಳಿಸುವಿಕೆ. ಪ್ರಕೃತಿಯಲ್ಲಿ ವೈಷಮ್ಯವನ್ನು ಉದ್ರೇಕಿಸದೆ ಸಮಸ್ಥಿತಿಯಲ್ಲಿಡುವಿಕೆ. “ನಿರ್ದೋಷಮ್ ಹಿ ಸಮಂ ಬ್ರಹ್ಮ” ಎಂಬುದಾಗಿ ಪರಮಾತ್ಮನೇ ಸಮನಾದ ವಸ್ತು. “ಕೇವಲ ಉದರತೃಪ್ತಿ ಮಾತ್ರವಲ್ಲದೆ ದಾಮೋದರನಿಗೂ ತೃಪ್ತಿಯಾಗುವಂತಿರಬೇಕು” ಎಂದು ಶ್ರೀರಂಗಮಹಾಗುರುಗಳು ಜ್ಞಾಪಿಸುತ್ತಿದ್ದರು. ಅವನನ್ನು ಅನುಭವಿಸಲು ಅಡ್ಡಿ ತಾರದಂತೆ ಇದ್ದರೆ ಪಾಕವು ಒಂದು ಕಲೆಯೆನ್ನಿಸಿಕೊಳ್ಳುವುದು.

ಪಾಕವು ಕೇವಲ ಕಲೆಯಲ್ಲ. ಇದು ಕಲೆಗಳ ತಾಯಿ. ಸಮಸ್ತ ಸೃಷ್ಟಿಯ ಜೀವಿಗಳನ್ನು ಬೆಳೆಸುವ ಮತ್ತು ಸಂತೃಪ್ತಿಗೊಳಿಸುವ ಕಲೆ. ದೇವಾಧಿದೇವತೆಗಳನ್ನೂ, ಗಾಯಕ, ನಟ, ಚಿತ್ರಕಾರ, ಕವಿ, ಲೇಖಕ, ಕೃಷಿಕ, ಸೈನಿಕ ಹೀಗೆ ಸಮಸ್ತರಿಗೂ ಪುಷ್ಟಿ ನೀಡುವ ಕಲೆ. ಆದರೆ ಆಯಾ ಕಲೆಗಳಿಗೆ ಹೊಂದುವಂತೆ ರಸ ಸಂಯೋಜನೆ ಬೇಕು. ಆಯಾ ಪ್ರವೃತ್ತಿಗೆ ಪೂರಕವಾಗುವಂತೆ ಕೊಡಬೇಕಾದ ಹದವು ವಿಭಿನ್ನವಾಗಿರುತ್ತದೆ. ಹದವರಿತು ತಯಾರಿಸಬಲ್ಲ ಮರ್ಮವು ಇದರಲ್ಲಿರುವುದರಿಂದ ಇದು ಕಲೆ ಮಾತ್ರವಲ್ಲದೆ ಸರ್ವಕಲೆಗಳ ತಾಯಿಯಾಗಿದೆ.

ಸೃಷ್ಟಿಯ ಮುಂದುವರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕಲೆಯಾಗಿ, ಮಾನವನಿಗೆ ಬೇಕಾಗುವ ದೇಹಪುಷ್ಟಿ, ಮನಸ್ತುಷ್ಟಿ ಮತ್ತು ಆತ್ಮದೃಷ್ಟಿಯನ್ನು ಪಾಕಕಲೆಯು ನೀಡುತ್ತದೆ. ಇಲ್ಲಿ ಭೋಗದೃಷ್ಟಿಯಲ್ಲದೆ ಯೋಗದೃಷ್ಟಿಯೂ ಉಂಟು. ಹುಳಿ-ಉಪ್ಪು-ಕಾರ ಮೊದಲಾದ ರಸಗಳೆಲ್ಲವೂ ಹದವಾಗಿ ಸಮರಸವಾದಾಗಲೇ ಅಡುಗೆಯು ಉತ್ತಮವಾಗುವುದು. ಸಮರಸತೆಯೇ ಪಾಕದ ತಿರುಳು. ರಸಸ್ವರೂಪಿಯಾದ ಪರಮಾತ್ಮನನ್ನು ಮರೆಯಾಗಿಸದ ರಸ. ಜೊತೆಗೆ ಇಂದ್ರಿಯಕ್ಷೇತ್ರದಲ್ಲಿಯೂ ಮೂಲರಸದ ಆಂಶಿಕವಾದ ಆಸ್ವಾದನೆಯಿದೆ.

ಇನ್ನೊಂದು ಅಂಶವನ್ನೂ ಗಮನಿಸಬೇಕು. ”ಭುಂಜತೇ ತೇ ತ್ವಘಂ ಪಾಪಾಃ ಯೇ ಪಚಂತ್ಯಾತ್ಮಕಾರಣಾತ್” ಎಂದು ಶ್ರೀಕೃಷ್ಣನು ಎಚ್ಚರಿಸುತ್ತಾನೆ. ಯಾರು ತನಗೊಸ್ಕರ ಅಡುಗೆ ಮಾಡುತ್ತಾರೆಯೋ ಅವರು ಪಾಪವನ್ನೇ ಊಟ ಮಾಡುತ್ತಾರೆ. ಆಹಾರಪದಾರ್ಥಗಳೂ ಭಗವಂತನಿಂದಲೇ ಬಂದಂತಹವು. ನಾವೂ ಅವನ ಸೃಷ್ಟಿಗೊಳಪಟ್ಟವರೇ. ಇಬ್ಬರಿಗೂ ಸ್ವಾಮಿಯು ಅವನೇ. ಆದ್ದರಿಂದ ಅವನ ಪದಾರ್ಥವನ್ನು ಬಳಸುವಾಗ ಇದು ಅವನದು ಎಂಬ ಅರಿವಿರಬೇಕು. ಆಗ ನಾವು ಕಳ್ಳರಾಗುವುದಿಲ್ಲ. ಅದು ಅವನ ಸ್ಮರಣೆಯಿಂದಾಗಿ, ಅವನ ನಿವೇದನೆಗೊಳಪಟ್ಟು ಪ್ರಸಾದವಾಗಿ ಪರಿವರ್ತಿತವಾಗುವುದು. ಆದ್ದರಿಂದ ಇದು ಯಜ್ಞರೂಪವಾದ ಕ್ರಿಯೆ.
“ಅಡಿಗಡಿಗೆ ಭಗವತ್ಸ್ಮರಣೆಯನ್ನು ತಂದುಕೊಡುವ ಅಡುಗೆಯೇ ಅಡುಗೆ.”ಎಂಬ ಶ್ರೀರಂಗಮಹಾಗುರುವಿನ ಮಾತು ಇಲ್ಲಿ ಉಲ್ಲೇಖಾರ್ಹವಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಅಡುಗೆಮನೆ, ಪಾಕಕರ್ತರು, ಒಲೆ, ಪಾತ್ರೆಗಳು, ಮನೋಧರ್ಮ,  ಇವುಗಳ ವಿನ್ಯಾಸಗಳನ್ನು ಮುಂದೆ ಗಮನಿಸೋಣ.  

ಸೂಚನೆ: 24/12/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, December 22, 2019

ಪುಣ್ಯ - ಪಾಪ (Punya-paapa)

ಲೇಖಕರು:  ಶ್ರೀಮತಿ ಮೈಥಿಲೀ ರಾಘವನ್ 
   ಪ್ರತಿಕ್ರಿಯಿಸಿರಿ lekhana@ayvm.in


ಪುಣ್ಯ-ಪಾಪಗಳು virtue and Sin ಎಂಬುದರ ಪರ್ಯಾಯವಾಗಿ ಪರಿಗಣಿಸಲ್ಪಡುತ್ತಿದೆ. ಈ ಪದಗಳು ನೈತಿಕವಾದ ಹಾಗೂ ಅನೈತಿಕವಾದ ವರ್ತನೆಯನ್ನು ಸೂಚಿಸುತ್ತವೆ. ವಾಸ್ತವಿಕವಾಗಿ ಪುಣ್ಯ ಎಂಬುದಕ್ಕೆ ಪರ್ಯಾಯವಾದ ಪದವೇ ಆಂಗ್ಲ ಭಾಷೆಯಲ್ಲಿಲ್ಲ!

ಭಾರತದೇಶದಲ್ಲಿ ಈ ಪದಗಳನ್ನು ಬಾಲ್ಯದಿಂದಲೇ ಪರಿಚಯಮಾಡಿಸುವ ರೂಡಿ ಬೆಳೆದುಬಂದಿದೆ. “ತಪ್ಪು ಮಾಡಬೇಡ, ಪಾಪ ಬರುತ್ತೆ”, “ಒಳ್ಳೆಯ ಕಾರ್ಯಮಾಡು ಪುಣ್ಯ ಬರುತ್ತೆ” ಎಂದು ಸಣ್ಣಮಕ್ಕಳನ್ನು ಎಚ್ಚರಿಸುವುದುಂಟು. ಹಿಂದಿನ ಪೀಳಿಗೆಯವರು ಈ ಮಾತುಗಳನ್ನು ಗೌರವಿಸುತ್ತಿದ್ದಂತೆ ಇಂದಿನವರು ಒಪ್ಪುವರೆಂಬ ನಿಶ್ಚಯವಿಲ್ಲ. ಪಾಪ-ಪುಣ್ಯ ಎಂದರೆ ಏನು ಎಂಬ ಪ್ರಶ್ನೆಯೇ ಮೊದಲು ಎದ್ದು ನಿಲ್ಲುತ್ತದೆ. ಸರಿಯಾದ ಉತ್ತರವು ಸಿಗದಿದ್ದಾಗ ಇವೆಲ್ಲವೂ ಮೂಢನಂಬಿಕೆಯ ಕಂತೆಗಳಾಗಿ ಉಳಿಯುತ್ತವೆ. ಆದ್ದರಿಂದ ಈ ಪದಗಳು ಏನನ್ನು ಸೂಚಿಸುತ್ತಿವೆ ಎಂಬುದರ ನಿರ್ದಿಷ್ಟವಾದ ಅರಿವು ಅಗತ್ಯ. ಇದು ವಿಸ್ತಾರವಾದ ವಿಶ್ಲೇಷಣೆಗೆ ವಿಷಯವಾಗಿದ್ದರೂ ಇಲ್ಲಿ ಕೆಲವು ಅಂಶಗಳನ್ನು ಮಾತ್ರವೇ ಬರೆಯಲಾಗಿದೆ.

ಪುಣ್ಯ ಎಂಬ ಪದವು ಏರುವಿಕೆಯನ್ನು ಸೂಚಿಸುವುದೆನ್ನಬಹುದು. ಪುಣ್ಯಕ್ಕೆ ವಿರುದ್ಧವಾದ ಪಾಪ ಎಂಬ ಪದವು ’ಪತನ’ವೆಂಬುದರ ಪರ್ಯಾಯವಾಗಿದೆ. ಪತನ- ಬೀಳುವುದು, ಎಂದಾಗ ಬೀಳುವುದು ಯಾವುದು? ಎಲ್ಲಿಂದ ಎಲ್ಲಿಗೆ ಬೀಳುತ್ತದೆ? ಪಾಪ ಬರುವುದೆಂದರೆ ಏನರ್ಥ? ಇತ್ಯಾದಿ ಪ್ರಶ್ನೆಗಳು ಏಳುತ್ತವೆ. ಆಹಾರ-ವಿಹಾರಗಳಲ್ಲಿ ಎಚ್ಚರಿಕೆ ತಪ್ಪಿ ವರ್ತಿಸಿದರೆ, ಮಿತಿಮೀರಿದ ಆಹಾರಸೇವನೆಯಾದರೆ, ಛಳಿಗಾಳಿ ಅಥವಾ ತೀವ್ರ ಬಿಸಿಲಿಗೆ ಮೈಯೊಡ್ಡಿದರೆ ಅದು ಆರೋಗ್ಯಕ್ಕೆ ಹಾನಿಕರ. ಇದನ್ನೇ ಆದರ್ಶವಾದ ಆರೋಗ್ಯಸ್ಥಿತಿಯಿಂದ ’ಜಾರುತ್ತೇವೆ,
ಬೀಳುತ್ತೇವೆ’ ಎಂದೂ ಹೇಳಬಹುದು. ಶರೀರದಂತೆಯೇ ಮನಸ್ಸು ತನ್ನ ಸುಸ್ಥಿತಿಯಿಂದ ಜಾರಿದಾಗ ಅದನ್ನೂ ಪತನ ಎಂದು ಕರೆಯಬಹುದು. ಮನುಷ್ಯನ ಜೀವನದಲ್ಲಿ ಮನಸ್ಸೆಂಬುದು ಅತಿಮುಖ್ಯಪಾತ್ರವನ್ನು ವಹಿಸುತ್ತದೆ. ಮನಸ್ಸು ಸದ್ಗುಣಗಳಿಂದ ಕೂಡಿದ್ದರೆ ನೈತಿಕವಾದ ಜೀವನವನ್ನು ನಡೆಸಿ ಎಲ್ಲರ ಪ್ರೀತಿ-ಆದರ-ಗೌರವಗಳನ್ನು ಗಳಿಸಿ ಲೋಕದಲ್ಲಿ ಪ್ರಶಂಸನೀಯನಾಗಿ ಬೆಳಗುತ್ತಾನೆ. ಮನಸ್ಸು ಕೆಟ್ಟಾಗ ಏರ್ಪಡುವ ಅನೈತಿಕವಾದ ನಡೆ ಸಮಾಜದ ಶಿಸ್ತನ್ನು ಕೆಡಿಸಿ ಸಮಾಜವನ್ನೇ ಹಾಳುಮಾಡುವುದರಿಂದ ಅದು ಖಂಡನೀಯವೆಂಬುದನ್ನು ಎಲ್ಲ ದೇಶದವರೂ ಒಪ್ಪುತ್ತಾರೆ. ಮನಸ್ಸನ್ನು ಶುದ್ಧವಾದ ಸ್ಥಿತಿಯಿಂದ ಪತನಗೊಳಿಸುವ ದುಷ್ಕೃತ್ಯಗಳನ್ನೇ ಪಾಪವೆಂದು ಹೆಸರಿಸಿದ್ದಾರೆ. ’ಪಾಪ ಬರುತ್ತೆ’ ಎನ್ನುವ ಮಾತು ಅದರ ಫಲವಾಗಿ ಒದಗಿಬರುವ ಕಷ್ಟಗಳನ್ನೇ ಸೂಚಿಸುತ್ತದೆ. ತದ್ವಿರುದ್ಧವಾಗಿ, ಮನಸ್ಸಿನ ಶುದ್ಧಸ್ಥಿತಿಗೆ ಪೋಷಕವಾದ ಕಾರ್ಯಗಳು ಪುಣ್ಯಕಾರ್ಯಗಳಾಗುತ್ತವೆ ಮತ್ತು ಅವುಗಳ ಫಲವಾದ ಸುಖ- ಸಂತೋಷಗಳೇ ಪುಣ್ಯವೆಂದೂ ವ್ಯವಹರಿಸಲ್ಪಡುತ್ತವೆ.

ಲೌಕಿಕಜೀವನ ಮಾತ್ರವಲ್ಲದೆ ಪಾರಮಾರ್ಥಿಕವನ್ನೂ ಅರಿತಿದ್ದ ಭಾರತೀಯ ಮಹರ್ಷಿಗಳು ಈ ವಿಚಾರದಲ್ಲಿ ಕಂಡ ವಿಶೇಷಾಂಶವನ್ನು ಶ್ರೀರಂಗಮಹಾಗುರುಗಳು ಎತ್ತಿತೋರಿಸಿದ್ದಾರೆ. ಶುದ್ಧವಾದ ಮನಸ್ಸಿನಲ್ಲಿ ಅರಳುವ ಸದ್ಗುಣಗಳು ಆತ್ಮಗುಣಗಳಾಗಿ ಪರಿಣಮಿಸಿದಾಗ ಮನಸ್ಸು ತನ್ನೊಳಗೆ ಬೆಳಗುವ ಪರಮಾತ್ಮನನ್ನೇ ತೋರಿಸಲು ಸಮರ್ಥವಾಗುವುದು. ಆ ರೀತಿಯಲ್ಲಿ ಮನಸ್ಸಿನ ಸುಸ್ಥಿತಿಯನ್ನು ಕಾಪಿಡಲು ತಂದ ವಿಧಿ-ನಿಷೇಧಗಳನ್ನು ಅವರು ಪುಣ್ಯ-ಪಾಪಗಳ ಹೆಸರಿನಲ್ಲಿಯೂ ಇಟ್ಟಿರುವುದುಂಟು. ಆದ್ದರಿಂದ ಲೌಕಿಕವಾದ ಏಳಿಗೆಗೆ ಮಾತ್ರವಲ್ಲದೆ, ಪಾರಮಾರ್ಥಿಕವಾದ ಶ್ರೇಯಸ್ಸಿಗಾಗಿಯೂ ಸಹ ಪಾಪಗಳಿಂದ ನಮ್ಮನ್ನು ದೂರಮಾಡಿ ಪುಣ್ಯಕೃತ್ಯಗಳನ್ನು ಕೈಗೊಳ್ಳಬೇಕೆನ್ನುವುದು ಸಿದ್ಧವಾಗುತ್ತದೆ. ಜ್ಞಾನಿಗಳು ಮತ್ತೊಂದು ಹೆಜ್ಜೆ ಮುಂದೆ ಸಾಗಿ ಪಾಪಗಳನ್ನು ವರ್ಜಿಸುವುದು ಮಾತ್ರವಲ್ಲದೆ ಪುಣ್ಯಗಳನ್ನೂ ತ್ಯಜಿಸ ಬೇಕೆನ್ನುತ್ತಾರೆ!
ಶಂಕರಭಗವತ್ಪಾದರು ರಥ್ಯಾಕರ್ಪಟ ವಿರಚಿತ ಕಂತಃ ಪುಣ್ಯಾಪುಣ್ಯ ವಿವರ್ಜಿತ ಪಂಥಃ.. ಯೋಗಿಯಾದವನು ಪುಣ್ಯ-ಪಾಪಗಳೆರಡರಿಂದಲೂ ದೂರನಾಗಿ ಯೋಗಮಾರ್ಗದಲ್ಲಿ ಸಾಗಿ ತನ್ನೊಳಗೆ ಬೆಳಗುವ ಜ್ಯೋತಿಯಲ್ಲಿ ರಮಿಸಿ ಆನಂದಿಸುತ್ತಾನೆ ಎಂದು ಹಾಡಿದ್ದಾರೆ. ಪಾಪಗಳನ್ನು ಬಿಟ್ಟು ಪುಣ್ಯಕರ್ಮಗಳನ್ನು ಮಾತ್ರವೇ ಆಚರಿಸಬೇಕು. ಕ್ರಮೇಣ ಪುಣ್ಯಕರ್ಮಗಳನ್ನೂ ಭಗವತ್ಪ್ರೀತ್ಯರ್ಥವಾಗಿ ಮಾತ್ರವೇ ಆಚರಿಸಿ ತನ್ಮೂಲಕ ಪುಣ್ಯಫಲದ ಅಂಟಿನಿಂದಲೂ ವಿಮುಕ್ತರಾಗಬೇಕು. ಆಗ ಯೋಗಮಾರ್ಗದ ಹಾದಿ ಸುಗಮ, ತದನಂತರ ಆನಂದದಿಂದ ನಲಿಯುವುದೂ ಸುನಿಶ್ಚಿತ. ಇದನ್ನೇ ’ಮುರಾರಿ ನಿನ್ನದೇ ಮೂರನೆ ದಾರಿ’ ಎಂಬುದಾಗಿ ಕೊಂಡಾಡಿದ್ದಾರೆ. ಅಂತಹ ಮೂರನೇ ದಾರಿಯನ್ನು ಹಿಡಿಯಲು ಪ್ರಯತ್ನಿಸುವುದು ಜಾಣತನವಲ್ಲವೇ.

ಸೂಚನೆ:  19/12/2019 ರಂದು ಈ ಲೇಖನ ವಿಶ್ವ ವಾಣಿಯ ಗುರು ಪುರವಾಣಿ ಅಂಕಣದಲ್ಲಿ ಪ್ರಕಟವಾಗಿದೆ.

ವೈರಾಗ್ಯ (Vairagya)

ಲೇಖಕರು: ಕೆ.ಎಸ್.ರಾಜಗೋಪಾಲನ್
   ಪ್ರತಿಕ್ರಿಯಿಸಿರಿ lekhana@ayvm.in


ಮನುಷ್ಯನಿಗೆ ವೈರಾಗ್ಯವಿದ್ದರಷ್ಟೆ ಅವನು ದೇವರನ್ನು ನೋಡಲು ಸಾಧ್ಯ ಎಂಬನಂಬಿಕೆ, ಎಷ್ಟೋಜನಗಳಲ್ಲಿದೆ. ಶ್ರೀಕೃಷ್ಣನೂ ಭಗವದ್ಗೀತೆಯಲ್ಲಿ ಅಭ್ಯಾಸ, ವೈರಾಗ್ಯಗಳ ಮೂಲಕವೇ ಮನಸ್ಸನ್ನು ನಿಗ್ರಹಿಸಬಹುದೆನ್ನುತ್ತಾನೆ. ನಾವು ಬದುಕಿರುವವರೆವಿಗೂ ನಮಗೆ ಎಷ್ಟೋ ಆಸೆಗಳಿದ್ದೇ ಇರುತ್ತವೆ. ಇವೆಲ್ಲವನ್ನೂ ಬಿಡುವುದುಹೇಗೆ? “ಹುಚ್ಚು ಬಿಟ್ಟಹೊರತು ಮದುವೆಯಿಲ್ಲ; ಮದುವೆಯಾದ ಹೊರತು ಹುಚ್ಚುಬಿಡುವುದಿಲ್ಲ” ಎಂಬಂತೆ ನಿಜಕ್ಕೂ ಭಗವಂತನನ್ನು ಕಂಡಹೊರತು ಪ್ರಾಪಂಚಿಕ ವಿಷಯಗಳ ಬಗ್ಗೆ ವೈರಾಗ್ಯ ಬರುವುದಿಲ್ಲ. ವೈರಾಗ್ಯ ಬಂದ ಹೊರತು ದೇವರು ಸಿಕ್ಕುವುದಿಲ್ಲ-- ಎನ್ನುವಂತೆಯೇ ಇದೆ. ಆದ್ದರಿಂದ ವೈರಾಗ್ಯದ ಬಗ್ಗೆ ಸ್ವಲ್ಪ ಚಿಂತನೆ ಬೇಕೆನಿಸುತ್ತದೆ.

ರಾಗವೆಂದರೆ ಅತಿಯಾದ ಪ್ರೀತಿ; ಒಂದು ವಿಧವಾದ ಅಂಟು. ವೈರಾಗ್ಯವೆಂದರೆ ಅಂಟಿಲ್ಲದಿರುವುದು. ಹಿರಿಯರೊಬ್ಬರು ಒಂದು ಉದಾಹರಣೆ ಕೊಡುತ್ತಿದ್ದರು. ಕುರ್ಚಿಯ ಮೇಲೆ ಕುಳಿತುಕೊಳ್ಳುವುದು ತಪ್ಪಲ್ಲ; ಕುರ್ಚಿಯಿಂದ ಎದ್ದ ಕೂಡಲೇ ಕುರ್ಚಿಯೂ ನಮಗೆ ಅಂಟಿಕೊಂಡು ನಮ್ಮೊಡನೆಯೇ ಎದ್ದರೆ ವ್ಯವಹಾರ ಹೇಗೆ ಸಾಗಬೇಕು? ಎಂದು. ಹೀಗಾಗಿ ವೈರಾಗ್ಯದ (ಅಂಟಿಲ್ಲದಿರುವಿಕೆಯ) ಅವಶ್ಯಕತೆ ಯಾರಿಗಾದರೂ ತಿಳಿಯುತ್ತದೆ. 

ನಿಜವಾದ ವೈರಾಗ್ಯದಿಂದ ಯಾರಾದರೂ ಇದ್ದದ್ದುಂಟೆ? ಎಂಬ ಪ್ರಶ್ನೆ ಏಳಬಹುದು. ಅದಕ್ಕೊಂದೆರಡು ಉದಾಹರಣೆಗಳು- ಶ್ರೀರಾಮಕೃಷ್ಣ ಪರಮಹಂಸರು ದೇವಾಲಯವೊಂದರಲ್ಲಿ ಅರ್ಚಕರಾಗಿದ್ದರು. ದೇವಾಲಯದವರು ಬಂದು, ‘ಆಡಳಿತವರ್ಗದಆಜ್ಞೆಯಾಗಿದೆ; ನೀವಿನ್ನು ಕೆಲಸಬಿಟ್ಟು ಹೋಗಬೇಕಂತೆ’ ಎಂದರು. ಅಲ್ಲಿಯವರೆಗೆ ಅತ್ಯಂತ ಶ್ರದ್ಧಾಭಕ್ತಿಗಳಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಪರಮಹಂಸರು, ಸ್ವಲ್ಪವೂ ವಿಚಲಿತರಾಗದೇ “ಹಾಗೋಸರಿ” ಎನ್ನುತ್ತಾ ಹೆಗಲ ಮೇಲೆ ಚೌಕವನ್ನು ಹಾಕಿಕೊಂಡು ಹೊರಟೇಬಿಟ್ಟರು. ಪುನಃ ಅವರನ್ನು ಅಲ್ಲಿಗೆ ಬರಮಾಡಿಕೊಳ್ಳಲು ದೇವಾಲಯದ ಅಧಿಕಾರಿಗಳು ಇಚ್ಚೆಪಟ್ಟಾಗ, ಒತ್ತಾಯದಿಂದ ಹಿಂದಿರುಗುವಂತೆ ಮಾಡಬೇಕಾಯಿತು. 

ಪಟ್ಟಾಭಿಷಿಕ್ತನಾಗಬೇಕಿದ್ದ ಶ್ರೀರಾಮನು ಕಾಡಿಗೆ ಹೊರಡಬೇಕೆಂದಾಗಲೂ ಅವನ ಮನಸ್ಸಿನಲ್ಲಿ ಕಿಂಚಿತ್ತಾದರೂ ವಿಕಾರವು ಏರ್ಪಡಲಿಲ್ಲವೆಂದು ವಾಲ್ಮೀಕಿಗಳು ಬಣ್ಣಿಸಿದ್ದಾರೆ. 
ಒಂದು ವಿಷಯದಲ್ಲಿ ತೊಡಗಿಕೊಂಡಾಗ ಆ ವಿಷಯವನ್ನು ಒಂದೇ ಮನಸ್ಸಿನಿಂದ ಭಾವಿಸಬೇಕು. ಆ ಕಾಲದಲ್ಲಿ ಉಳಿದೆಲ್ಲ ವಿಷಯಗಳ ಬಗ್ಗೆ ವೈರಾಗ್ಯವಿರಬೇಕು. ಆಗಷ್ಟೇ ನಮ್ಮ ಮನಸ್ಸು ಲಕ್ಷ್ಯವನ್ನು ಸಾಧಿಸಬಲ್ಲದು. ಅಂತೆಯೇ ಭಗವಂತನ ಧ್ಯಾನಕ್ಕೆ ಕುಳಿತಾಗ ಪ್ರಪಂಚದ ಉಳಿದೆಲ್ಲ ವಿಷಯಗಳನ್ನು ದೂರತಳ್ಳಿ ಕುಳಿತುಕೊಳ್ಳಬೇಕು. ಹೀಗೆ ಮಾಡಲು ಅಭ್ಯಾಸಬೇಕು. ನಾವು ವ್ಯವಹರಿಸುವ ಎಲ್ಲ ವಿಷಯಗಳಲ್ಲೂ ಅಂಟಿದ್ದರೆ ಧ್ಯಾನಕ್ಕೆ ಕುಳಿತಾಗಲೂ ಆ ವಿಷಯಗಳೇ ನಮ್ಮ ಮನಸ್ಸನ್ನು ಆವರಿಸುತ್ತವೆ. ಹೀಗಾದಾಗ ಧ್ಯಾನದಲ್ಲಿ ಏಕಾಗ್ರತೆ ಹೇಗೆ ಸಾಧ್ಯ?

ಮುಂದೆ ಒಳ್ಳೆಯ ಕೆಲಸ ಸಿಗುವುದೆಂಬ ಗುರಿಯನ್ನಿಟ್ಟುಕೊಂಡು, ಒಬ್ಬ ಜಾಣ ವಿದ್ಯಾರ್ಥಿಯು ತನಗೆ ಆಕರ್ಷಣೆಯಿರುವ ಎಲ್ಲ ವಿಷಯಗಳಲ್ಲಿ ವೈರಾಗ್ಯವನ್ನು ಹೊಂದಿ, ವ್ಯಾಸಂಗವನ್ನು ಮಾಡಲು ತೊಡಗುತ್ತಾನೆ. ಹಾಗೆಯೇ, ಭಗವದ್ದರ್ಶನವು ಅತ್ಯಂತ ಸುಖವನ್ನು ಕೊಡುತ್ತದೆ ಎಂಬ ನಂಬಿಕೆಯು ಸಾಧನಾ ಕಾಲದಲ್ಲಿದ್ದರೆ ಉಳಿದ ವಿಷಯಗಳಲ್ಲಿ ವೈರಾಗ್ಯವುಂಟಾಗುತ್ತದೆ. ಆದರೆ ಪ್ರಕೃತಿ ಸಹಜವಾದ ಕಾಮನೆಗಳನ್ನು ಮೆಟ್ಟಿ, ಸಾಮಾನ್ಯವಾಗಿ ಯಾರೂ ಸಾಧನೆಮಾಡಲಾರರು. ಆದ್ದರಿಂದ ಇಹದ ಸುಖವನ್ನು ಯಾವರೀತಿಯಲ್ಲಿ ಅನುಭವಿಸಬೇಕೆಂಬುದನ್ನು ಅರಿಯಬೇಕು. ಇಂದ್ರಿಯ ಸುಖಗಳು ಬೇಡವೆನ್ನುವ ಬುದ್ಧಿಯೂ ಕೂಡದು. ಇಂದ್ರಿಯದಾಸ್ಯವೂ ಸಲ್ಲದು. 

ಶ್ರೀರಂಗಮಹಾಗುರುಗಳು ತಮ್ಮ ಪಾಠ ಪ್ರವಚನಗಳಲ್ಲಿ, ಬೇರೆ ಬೇರೆ ಸಂದರ್ಭಗಳಲ್ಲಿ ಇಂದ್ರಿಯ ಸುಖಾನುಭವದ ಬಗ್ಗೆ ತಿಳಿಸಿರುವುದನ್ನು ಸಂಗ್ರಹವಾಗಿ ಹೀಗೆ ಹೇಳಬಹುದು.
-ವಿಷಯ ಸುಖಗಳನ್ನು ಅನುಭವಿಸದಿದ್ದರೆ ಭಗವದಪಚಾರ. ಏಕೆಂದರೆ ಈ ಶರೀರವು ನಮಗೆ ಭಗವಂತಕೊಟ್ಟ ಆಸ್ತಿ. ಅವನ ಇಷ್ಟದಂತೆ ಈ ಆಸ್ತಿಯನ್ನು ಬಳಸಬೇಕು.
-ಇಂದ್ರಿಯ ಸುಖಾನುಭವ ಆತ್ಮ ಯೋಗಕ್ಕೆ ಅವಿರೋಧವಾಗಿರಬೇಕು.
-ಇಂದ್ರಿಯ ಸುಖಾನುಭವವೇ ಅಂತಿಮ ಗುರಿಯಲ್ಲ; ಇಂದ್ರಿಯಗಳ ಸುಖವು ಇಂದ್ರಿಯಾಧೀಶನಾದ ಭಗವಂತನ ಪ್ರೀತಿಯಲ್ಲಿ ನಿಲ್ಲಬೇಕು.

ಹೀಗೆ ಸರಿಯಾದ ರೀತಿಯಲ್ಲಿ ಇಂದ್ರಿಯ ಸುಖಾನುಭವವನ್ನು ಪಡೆದು, ಜೊತೆ ಜೊತೆಗೆ ಮನಸ್ಸನ್ನು ಪಳಗಿಸಿದರಷ್ಟೆ ನಿಜವಾದ ವೈರಾಗ್ಯ ಸಿದ್ಧಿಸೀತು. ನೀರಿಗಿಳಿದ ಹೊರತು ಈಜು ಬರುವುದಿಲ್ಲ. ಆದರೆ ಈಜು ಬಂದ ಹೊರತು ನೀರಿಗಿಳಿಯುವುದಿಲ್ಲ ಎನ್ನಲಾಗುವುದಿಲ್ಲವಷ್ಟೆ. ನೀರೊಳಗೆ ಬಿದ್ದೆದ್ದು ಈಜು ಕಲಿಯುವಂತೆ, ಸಂಸಾರದಲ್ಲಿದ್ದೂ, ಏಳು ಬೀಳುಗಳಿಗಂಟದೇ ವೈರಾಗ್ಯವನ್ನು ಸಾಧಿಸಹೊರಟರೆ, ಭಗವತ್ಕೃಪೆಯಿಂದ ಎಂದಾದರೊಮ್ಮೆ ಅದು ಫಲಿಸೀತು. ಕೈಗೆ ಎಣ್ಣೆಹಚ್ಚಿಕೊಂಡು ಹಲಸಿನಹಣ್ಣನ್ನು ಕುಯ್ಯುವವನ ಕೈ ಅಂಟಾಗದಂತೆ, ಭಗವದ್ಭಕ್ತಿ  ಎಂಬ ಜಿಡ್ಡನ್ನು ನಮಗೆ ಅಂಟಿಸಿಕೊಂಡು ದೈನಂದಿನ ವ್ಯವಹಾರವನ್ನು ಮಾಡಬೇಕು. ಅದೇ ನಿಜವಾದ ವೈರಾಗ್ಯ. 

ಸಾಮಾನ್ಯವಾಗಿ, ಬಹುಜನರ ಅಭಿಪ್ರಾಯದಂತೆ,  ವೈರಾಗ್ಯವೆಂದರೆ ಎಲ್ಲ ವಿಷಯಗಳಲ್ಲಿಯೂ ನೀರಸತೆ. ಆದರೆ ನಿಜವಾದ ವೈರಾಗ್ಯವಂತನಿಗೆ ಎಲ್ಲೆಲ್ಲೂ ರಸಾನುಭವವೇ!

ಸೂಚನೆ:  19/12/2019 ರಂದು ಈ ಲೇಖನ ವಿಶ್ವ ವಾಣಿಯ ಗುರು ಪುರವಾಣಿ ಅಂಕಣದಲ್ಲಿ ಪ್ರಕಟವಾಗಿದೆ. 

Believers and Non-Believers

Original Article by: Tharodi Suresha
English Rendering by:  M R Bhashyam


People who say “It Exists” are believers and people who say “No- It does not” are non believers. These are words which are in common use. What exactly are people saying when they say that “I believe” or “I do not”? Actually when believers say “It exists”,  they mean that they believe in the existence of GOD or when people argue “It does not exist” they mean that they believe that GOD does not exist. Whose saying is the right one? Does GOD really exist or is it simply a delusion? These questions are but natural.  Since believers are many in number, should we apply the principle of democracy and say that because majority of people believe in the existence of God and so “He exists”? He may be called by different names, names are not important, if there is existence, it is fine.

How then can we determine His existence? Is it not true that the existence of something that cannot be known by senses can be determined only by travelling to the realms far beyond? People who have that kind of faculty describe that as “Yogic Vision” or “Vision beyond the senses”. This type of vision is acquired by intense contemplation (Tapas) or by the grace of Guru.  Is it not true that things which cannot be seen by the naked eye can be seen if viewed through a microscope? Agnostics may argue that this is all deluding one’s own self and foolish.  If IT exists, it must be possible to know and experience IT through the senses, they say. It is futile to search for something which does not exist. If we search for IT throughout our lives and finally discover that IT does not exist, is it not a waste of our lives? - so the non-believers lament.  Even modern science does not subscribe to this type of argument. If we were to accept that research itself is futile, then the progress of the modern science would not have been possible.  

Shri SriRanga Mahaaguru used to classify people into four types – “Believer - Believer”, “Believer - Non-Believer”, “Non-Believer - Believer”, and “Non-Believer – Non-Believer”. A Believer- Believer is one who not only accepts the existence of God, but has integrated Him into his internal and external lives. He has experienced and has realized Its existence.  A “Believer- Non believer” though has accepted His existence within himself, says externally that He does not exist. In a kingdom of people with only one eye, it may be necessary for one’s own safety to pretend that one has only one eye.   It will not be surprising if a king with only one eye may want all his subjects to have only one eye.  A “NonBeliever – NonBeliever” does not believe in the existence of God. He lives his outer life also in the same vein. He walks the talk. But since a “NonBeliever- NonBeliever” is honest, it may be possible to make him understand the truth someday. But there is one dangerous category the “Non-Believer - Believer”. Though he does not internally believe in the existence of GOD, he pretends to be a believer to the outside world. He makes only a show of being a believer. He has neither tasted nor has any extra-sensory experience. He just needs a title as “A great Believer”.  He does not have the intellectual integrity or the inclination to toil for knowing the truth, but, masquerades as a believer. Many a time this concocted acting is for filling the belly. Either knowingly or unknowingly, these types of people cultivate and promote deceit in the society and misuse social order.

We must always be wary of these ‘Non-Believer - Believer” category. The honest live and behave as they say. Their discourse leads one towards the Truth. Also, one must necessarily salute the honest “Believer- Believers”, “Believer – Non-Believers”, “Non-Believer – Non-Believers”.

Note: The Kannada version of this article can be viewed at AYVM blogs

Thursday, December 19, 2019

ஶ்ரீரங்கமஹாகுரு - 49 (Sriranga Mahaguru - 49)

ஶ்ரீகுருவின் கண்ணோட்டம் – 38

உறைவிடம் எங்கோதேடுதல் எங்கோ !
===========================================================
மூலம்: வரததேசிகாசார்யர் 
தமிழாக்கம்: ஜானகி



"நாம் விண்வெளியில் புகுந்தோம், சந்திரமண்டலத்தில் கால் பதித்தோம்: ஆனால் எங்கேயும் எந்த கடவுளும் நம் கண்ணுக்கு புலப்படவில்லை. இவ்வாறு எங்கும் இல்லாது யாருடைய கண்ணிற்கும் புலப்படாது உள்ள கற்பனைக் கடவுளை ஏன் பூஜிக்க வேண்டும்?  அதற்கு மாறாக கண்கூடாக காணும் மானுட உருவில் உள்ள மனித-கடவுளை பூஜிக்கலாம் வாருங்கள்" என ஒருவர் கூறினார்.

              மானுடருக்கு உதவுதல் எனும் இவருடைய விருப்பம் சரியானதே. ஆனால் கடவுளை பற்றி இவருடைய கருத்து  மட்டும் ஆழமானதாக இல்லை.

              'விண்வெளியில் புகுந்தால் அல்லது சந்திரமண்டலத்தில் கால் பதித்தால் அங்கு கடவுள் காணப்படுவான், அதுவே அவனின் உறைவிடம்' என்று எந்த ஞானியும் கூறியதில்லை. எந்த உயர்ந்த நூல்களிலும் அவ்வாறு கூறப்படவில்லை.

             "கஸ்தூரி மான் தன்னுடைய நாபியிலேயே (கொப்பூழ்) உள்ள கஸ்தூரியின் (ஒரு வித வாசனை திரவியம்) நறுமணத்தை தான் நடமாடும் இடமெல்லாம் பரப்புகிறது. ஆனால் 'எங்கிருந்தோ இம்மணம் வீசுகிறதே!' என அந்த முட்டாள் மிருகம் அதன் இருப்பிடத்தை அறியாது கண்ட செடி, மரங்களை முகர்ந்து காட்டில் அலைந்து திரிகிறது. அவ்வாறே  தனக்குள்ளேயே ஞானக் கண்களால் இறைவனை அறியாது புலன்களின் வெளிப்புறம் தேடித் திரிகிறான் மூர்க்க மனிதன்" என்கிறார் மஹான்  கபீர்.

            ‌'மலரில் நறுமணம் போல், கனியில் ரசம் போல் ஆன்மாவினுள் உறைகிறான் (ஆத்ம நாராயணன்) இறைவன். புலன்களை கட்டுக்குள் வைத்து அகக்கண்களினால் அவனை கண்டுகளிக்க வேண்டும் என உபதேசிக்கிறார்கள் பாகவதர்கள். 'புலன்களை உள்நோக்கி திருப்பினால் மட்டுமே ஆன்மாவினுள் உறைபவனின் தரிசனம் தீரனுக்கு' என்கிறது உபநிடதம்.

                இவ்வாறு எதையும் கவனியாமல் இறைவனின் இருப்பைப் பற்றி கூறுவது சரியல்ல. அகக்கண்களுக்கு மட்டுமே புலப்படும் (பரம்)பொருளை புறக்கண்களால் தேடி காணாமல் அப்பொருளே இல்லை என அறுதியிட்டு கூறுவது உண்மைக்கு நீதியன்று.

                                 (அடுத்த வியாழனன்று தொடரும்)

अर्थकामौ न केवलेन्द्रियार्थौ अपि तु पुरुषार्थौ (Arthakaamou na kevalendriyarthou api thu purushaartho)

लेखकः – विद्वान् नरसिंह भट्टः
प्रतिक्रियां दातुं शक्यते :  lekhana@ayvm.in

चत्वारः पुरुषार्थाः इति समेषां सामान्यजनानामपि ज्ञानमिदम् । ते च पुरुषार्थाः धर्मः अर्थः कामः मोक्षः इति । तत्राद्यः धर्मः । अन्त्यः मोक्षः । आद्यन्तौ उपादेयौ इत्यत्र नास्ति सन्देहः । सर्वे शास्त्रकाराः अपि मोक्ष एव चरमपुरुषार्थः स च सर्वैः अवश्यमधिगन्तव्यः इति एककण्ठेन उदघोषयन् । मोक्षसम्पादनार्थं धर्मोऽपि अनिवार्यः इति तेषामेव शास्त्रकाराणामाघोषः । परन्तु अत्र सन्देहस्य विषयस्तु अर्थकामौ कथं पुरुषार्थभूतौ इति ।
पुरुषः –जीवः तेन अर्थ्यते अपेक्ष्यते इति पुरुषार्थः । जीवस्य साहजिकीप्रवृत्तिः पुरुषार्थाणां सम्पादने भवत्येव । जीवेन यथा धर्ममोक्षौ साध्येते तथा अर्थकामावपि । यादृशौ अर्थकामौ जीवमूलभूतौ तादृशावेव सम्पादनीयौ भवतः । पुरुषः स्वाप्तिं प्राप्तुं साधनानि अपेक्षते । तानि साधनानि शरीरं तदन्तर्गतानीन्द्रियाणि मनः बुद्धिः इत्यादिरीत्या चतुर्दशतत्त्वरूपाणि । तैः एव एते चत्वारोऽपि पुरुषार्थाः साध्याः |
अत्रैव अर्थकामावपि पुरुषार्थौ इति मन्यन्ते । तर्हि एतौ कथं वा पुरुषार्थौ भवेताम् । यथा एतौ पुरुषार्थौ तथैव इन्द्रियार्थावपि । इन्द्रियद्वारा यदा अर्थः पुरुषेण विषयीभवति स च पुरुषार्थः भवति । यदा केवलम् इन्द्रिये एव अर्थस्य पर्यवसानं भवति तस्य न पुरुषार्थः इति व्यवहारः अपि तु इन्द्रियार्थः इति । यदा चेतनात्मकस्य पुरुषस्य समष्ट्या यत्कार्यसामान्यं स च पुरुषार्थः । एकं सुभाषितं स्मरामः यत्- “आहार-निद्रा-भय-मैथुनानि सामान्यमेतत्पशुभिर्नराणाम् ।“ इति । आहारादीनि यदा प्राणिसाम्यानि भवन्ति तदा तानीन्द्रियार्थानि भवन्ति । यदा एतान्येव ज्ञानसाधनत्वेन प्रयुक्तानि तदा तानि पुरुषार्थसाधकानि ।
धर्मानुगुणः मोक्षः साध्यः । तदर्थं ‘शरीरमाद्यं खलुधर्मसाधनम्’ इति रीत्या शरीरमतीवावश्यकम् । शरीरं विना मोक्षः न सिध्यत्येव । तर्हि शरीरं कथं संरक्षणीयं संवर्धनीयम् इति चेत् मोक्षसाधकत्वेन । शरीरपुष्टिः तुष्टिरेव न जीवनसाफल्यम् । शरीरपुष्ट्या पुरुषार्थः साधनीयः । अतः ज्ञानार्थं शरीरं तदर्थम् इन्द्रियार्थाणाम् आहारादीनाम् सङ्गहः । इन्द्रियार्थाणां सङ्गहार्थं कामः । एवं रीत्या अर्थकामसेवनम् अनुकूलाय कल्पते । अन्यथा धर्मं हित्वा केवलशरीरदृष्ट्या अर्थकामसेवनं नास्माकम् ऋषीणां सम्मतम् । निर्जीवदेहः किमपि नापेक्षते खलु । यथा ध्यान-तपो-यज्ञादिधर्माः पुरुषस्य अन्तरङ्गत्वेन सम्बन्धिनः तथा अर्थकामौ बहिरङ्गत्वेन सम्बन्धिनौ । एतौ न केवलौ देहधर्मौ पुरुषधर्मावपि । अत एव अर्थकामौ पुरुषार्थौ न केवलेन्द्रियार्थौ ।

ಆಹಾರ ತಯಾರಿಕೆ-ಇಂದಿನ ಚಿಂತನೆ. (Aahara thayarike - indina chinthane)

ಲೇಖಕರು:  ತಾರೋಡಿ ಸುರೇಶ
(ಪ್ರತಿಕ್ರಿಯಿಸಿರಿ lekhana@ayvm.in)


ಇಂದು ಆಹಾರ ತಯಾರಿಕೆಯ ವಿಷಯದಲ್ಲಿಯೂ ಬಹು ದೊಡ್ಡ ಪರಿವರ್ತನೆಯನ್ನು ಕಾಣುತ್ತಿದ್ದೇವೆ.ಕಳೆದ ನೂರು ವರ್ಷಗಳ ನಂತರ ಭಾರತಕ್ಕೆ ಭೆಟ್ಟಿ ಕೊಟ್ಟವರಿಗೆ ಪ್ರಾಯಶಃ ಗುರುತು ಸಿಗಲಿಕ್ಕಿಲ್ಲ.

ಮೊಟ್ಟಮೊದಲಿಗೆ ಗಮನ ಸೆಳೆಯುವ ಅಂಶವೆಂದರೆ ಯಂತ್ರೀಕರಣ. ಅಡುಗೆಮನೆಯನ್ನು ಶ್ರಮ ಮತ್ತು ಸಮಯವನ್ನು ಉಳಿಸಬಲ್ಲ ಮಿಕ್ಸಿ ಮುಂತಾದ ಬಗೆಬಗೆಯ ಯಂತ್ರಗಳು  ಹಿಂದಿನ ಒಲೆ, ಒರಳುಕಲ್ಲು, ಒನಕೆ ಇತ್ಯಾದಿಗಳ ಸ್ಥಾನವನ್ನಾಕ್ರಮಿಸಿವೆ.

ಎರಡನೆಯ ಅಂಶವೆಂದರೆ ದಿಡೀರ್ ಪದಾರ್ಥಗಳು. ದಿಡೀರ್  ದೋಸೆ ಹಿಟ್ಟು, ದಿಡೀರ್ ಮಸಾಲೆಪುಡಿಗಳು, ಅರ್ಧ ಬೇಯಿಸಲಾದ ತಿಂಡಿಗಳು, ಹೀಗೆ ಅವುಗಳದೇ ಒಂದು ದೊಡ್ಡ ಪಟ್ಟಿ. ದಂಪತಿಗಳಿಬ್ಬರೂ ದುಡಿಮೆಗೆ ತೆರಳಬೇಕಾದ ಇಂದಿನ ಅನಿವಾರ್ಯತೆಯಲ್ಲಿ, ಶೀಘ್ರತಮ ಕಾಲದಲ್ಲಿ ಅಡುಗೆಯನ್ನು ನಿರ್ವಹಿಸಲು ಇವು ಪರಮಾವಧಿಯ ಸಹಕಾರವನ್ನು ನೀಡಿವೆ.

ಮೂರನೆಯದಾಗಿ, ಅಡುಗೆಮನೆಯ ಪಾತ್ರೆಗಳು. ಹಿಂದೆ ಬಳಕೆಯಲ್ಲಿದ್ದ ತಾಮ್ರ, ಕಂಚು, ಹಿತ್ತಾಳೆಯ ಬದಲು ಪ್ಲಾಸ್ಟಿಕ್ ಕಂಗೊಳಿಸುತ್ತಿದೆ. ಇಂದು ಅದರ ವಿಪರಿಣಾಮಗಳ ಬಗ್ಗೆ ತಕ್ಕಮಟ್ಟಿನ ಎಚ್ಚರ ಉಂಟಾಗಿದ್ದರೂ ವಿನ್ಯಾಸ ವೈಭವ, ಸುಲಭ ಬೆಲೆ ಇತ್ಯಾದಿಗಳ ಆಕರ್ಷಣೆ ಹಾಗೆಯೇ ಇದೆ. ಅಲ್ಲೂಮಿನಿಯಮ್, ಸ್ಟೀಲ್, ಪಿಂಗಾಣಿ, ಗಾಜು-ಇವುಗಳ ವಿಶೇಷ ಬಳಕೆಯನ್ನೂ ಕಾಣಬಹುದು.
ಸ್ನಾನ ಮಾಡಿರಬೇಕಾಗಿಲ್ಲ. ಶುದ್ಧ ವಸ್ತ್ರ ಬಹುಮುಖ್ಯವಲ್ಲ. ಕೈ ತೊಳೆದು ಶುದ್ಧವಾಗಿ ಮಾಡಿದರೆ ಆಯಿತಲ್ಲವೆ?. ಶುಚಿ-ರುಚಿಯಾಗಿದ್ದರೆ ಸರಿ. ಹಿಂದೆ ಒಲೆಯನ್ನು ಗುಡಿಸಿ, ಸಾರಿಸಿ ರಂಗವಲ್ಲಿಯಿಂದ ಅಲಂಕರಿಸಿ, ಸ್ನಾನ ಮಾಡಿ ನಂತರ ಅಡುಗೆ. ಆದರೆ ಇಂದಿನ ಲೋಹದ ಒಲೆಯನ್ನು ಸಾರಿಸಿ, ರಂಗವಲ್ಲಿಯಿಂದ ಅಲಂಕರಿಸುವುದು ಹಾಸ್ಯಾಸ್ಪದ.

ಗಂಡಸರು ಅಡಿಗೆ ಮಾಡಬೇಕೇ ಅಥವಾ ಹೆಂಗಸರೋ? ಹಿಂದೆ ಗೃಹಿಣಿಯು ಮನೆಯಲ್ಲಿರುತ್ತಿದ್ದಳು. ಆಗ ಅವಳು ಅಡಿಗೆ ಮಾಡುವುದು ಔಚಿತ್ಯಪೂರ್ಣ. ಈಗ ಹಾಗಿಲ್ಲ. ಅವಳೂ ದುಡಿಯಲು ಹೊರಗೆ ಹೋಗುತ್ತಾಳೆ. ಆದ್ದರಿಂದ ಯಾರಿಗೆ ಬಿಡುವಿದೆಯೋ ಅವರು ಮಾಡಲಿ ಎಂಬುದು ಪ್ರಚಲಿತ ವಾದ.
ಅಡುಗೆಯಲ್ಲಿ ಮನೋಧರ್ಮದ ಪಾತ್ರವೇನಾದರೂ ಇದೆಯೇ? ಇದೆಂತಹ ಹುಚ್ಚು ಪ್ರಶ್ನೆ? ಶುಚಿ-ರುಚಿಯಾಗಿದ್ದರೆ ಸರಿ. ಕೋಪದಿಂದ ತಯಾರಿಸಲಿ, ದುಃಖದಲ್ಲಿದ್ದಾಗ ಮಾಡಲೀ ಅಡುಗೆ ಹಾಳಾಗಬಾರದು. ಯಾವ ಅಡುಗೆಯನ್ನು ಮಾಡಲು ಯಾವ ಸಾಮಗ್ರಿಗಳು ಬೇಕು, ಅವುಗಳ ಉಚಿತಪ್ರಮಾಣ, ತಯಾರಿಸುವ ವಿಧಿವಿಧಾನಗಳು ಇಷ್ಟು ಗೊತ್ತಿದ್ದರೆ ಸಾಕು. ಸೌಖ್ಯಕ್ಕಾಗಿ ರುಚಿ, ಆರೋಗ್ಯಕ್ಕಾಗಿ ಶುಚಿ, ನಮ್ಮ ಮನಸ್ಸಂತೋಷಕ್ಕಾಗಿ ವೈವಿಧ್ಯತೆ ಇಷ್ಟು ತಿಳಿದಿರಬೇಕು. ಇಂತಹ ಅಡುಗೆಯನ್ನು ಸಿದ್ಧಪಡಿಸುವ ಕೌಶಲ್ಯವೇ ಪಾಕಕಲೆ.ಆದ್ದರಿಂದ ಇದಕ್ಕಿಂತ ಹೆಚ್ಚೇನನ್ನೂ ಪಾಕಕಲಾವಂತನು ತಿಳಿದಿರಬೇಕಿಲ್ಲ.

ಅಡುಗೆಮನೆ ಎಲ್ಲಿರಬೇಕು?. ಒಲೆಯಾಗಲೀ, ಅಡುಗೆಯವರಾಗಲೀ ಇರಬೇಕಾದ ದಿಕ್ಕು ಯಾವುದು?. ಯಾವದಿನ ಯಾವ ಅಡುಗೆ?. ಇವೆಲ್ಲಾ ನಂಬಿಕೆಯ ವಿಷಯಗಳು ಅಷ್ಟೆ.
ಹೀಗೆ ಇಂದಿನವರ ಚಿಂತನೆ ಸಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಬಂದ ಸಂಪ್ರದಾಯಗಳ ಭಗ್ನಾವಶೇಷಗಳು ಬೇರೊಂದು ಕಥೆಯನ್ನೇ ಹೇಳುತ್ತವೆ. ”ಕಲೆಯು ಕಲಾನಾಥನತ್ತ ಕರೆದೊಯ್ಯಬೇಕು” ಇದು ಶ್ರೀರಂಗಮಹಾಗುರುಗಳು ಕೊಟ್ಟ ಸೂತ್ರ.ಈ ಸೂತ್ರ ಮತ್ತು ಪೀಠಿಕೆಯ ಹಿನ್ನೆಲೆಯಲ್ಲಿ ಮುಂದಿನ ಲೇಖನಗಳನ್ನು ಗಮನಿಸೋಣ. 


ಸೂಚನೆ: 17/12/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, December 16, 2019

ಜಯ-ಪುಣ್ಯಗಳನ್ನು ಅನುಗ್ರಹಿಸುವ ಜಯನ್ತೀ (Jaya punyagalannu anugrahisuva jayanthi)

ಲೇಖಕರು: ವಿದ್ವಾನ್ ಎನ್.ಎನ್.ಚಂದ್ರಶೇಖರ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



ಪ್ರತಿಯೊಬ್ಬರೂ ತಮ್ಮ ತಮ್ಮ ಹುಟ್ಟು ಹಬ್ಬವನ್ನು ಪ್ರತಿವರ್ಷವೂ ತಪ್ಪದೇ ಆಚರಿಸುವ ರೂಢಿ ಇದೆ. ಹುಟ್ಟು ಹಬ್ಬವನ್ನು “ವರ್ಧನ್ತೀ” ಎಂದು ಕರೆದರೆ ರಾಮಕೃಷ್ಣಾದಿಗಳ ಜನ್ಮ ದಿನಾಚರಣೆಯನ್ನು “ಜಯನ್ತೀ” ಎಂದು ಕರೆದಿದ್ದಾರೆ. ಶ್ರೀರಾಮನವಮಿ, ಶ್ರೀ ಕೃಷ್ಣಾಷ್ಟಮಿ ಆಚರಣೆಯನ್ನು ಭಾರತೀಯರು ಆಸೇತುಶೀತಾಚಲ ತಪ್ಪದೇ ಶ್ರದ್ಧೆಯಿಂದ ನಡೆಸುತ್ತಾರೆ. ದಿನ ಪೂರ್ತಿ ಉಪವಾಸ (ಭಗವಂತನ ಸನ್ನಿಧಿಯಲ್ಲಿ ವಾಸ) ವಿದ್ದು ಶ್ರೀ ರಾಮಭಜನೆ, ಶ್ರೀ ಕೃಷ್ಣನಿಗೆ ಚಂದ್ರೊದಯ ಕಾಲದಲ್ಲಿ ಅರ್ಘ್ಯಪ್ರದನಾದಿಗಳನ್ನು ಮಾಡುತ್ತಾರೆ. ದಿನವೆಲ್ಲಾ ತಮ್ಮ ಮನೋಬುದ್ಧೀನ್ದ್ರಿಯಗಳನ್ನು ಶ್ರೀ ರಾಮಮಯವಾಗಿ, ಶ್ರೀ ಕೃಷ್ಣಮಯವಾಗಿ ಮಾಡಿಕೊಂಡು ರಾತ್ರಿ ಸತ್ಕಥಾಶ್ರವಣದೊಂದಿಗೆ ಜಾಗರಣೆಯನ್ನು ಮಾಡಿ ಮಾರನೆಬೆಳಗ್ಗೆ ಪಾರಣೆ ಮಾಡುತ್ತಾರೆ. ಜೀವನದ ಪರಮಗುರಿಯನ್ನು ಅರಿತ ಭಾರತೀಯ ಋಷಿಮುನಿಗಳು ಸಕಲಭಾರತೀಯರ ಯೋಗಕ್ಷೇಮಕ್ಕಾಗಿ ಇಂತಹ ಮೇಲ್ಪಂಕ್ತಿಗಳನ್ನು ಹಾಕಿಕೊಟ್ಟು ಸಕಲರ ಉದ್ಧಾರದ ಕನಸನ್ನು ಕಂಡಿದ್ದಾರೆ. ಈ ಕುರಿತು ಶ್ರೀರಂಗಮಹಾಗುರುಗಳ ಅಮೃತವಾಣಿಯನ್ನು ಸ್ಮರಿಸಬೇಕು - “ಆತ್ಮಾರಾಮರ ಹೃದಯದಲ್ಲಿ ಪ್ರಭುವಾಗಿ, ಪ್ರಕೃತಿಯಲ್ಲಿ ಇಳಿದುಬಂದು, ತನ್ನ ಅಪ್ರಾಕೃತಭಾವಕ್ಕೆ ಕೊಂಡೊಯ್ಯುವ ನವರಸ ನಾಯಕನಾದ ಶ್ರೀರಾಮನ ಸ್ತುತಿಯನ್ನು ಆತನ ಜನ್ಮದಿನದಲ್ಲಿ ಮಾಡೋಣ. ಹೃದಯದ ಅಷ್ಟದಳಪದ್ಮದಲ್ಲಿ ಜ್ಞಾನಮುದ್ರೆಯಿಂದ ಕುಳಿತು ಭೋಗ ಮೋಕ್ಷಗಳನ್ನು ದಯಪಾಲಿಸುವ ಪ್ರಭುವನ್ನು ಸ್ತುತಿಸೋಣ.”

“ಶ್ರೀಕೃಷ್ಣನು ಮಕ್ಕಳೊಡನೆ ಮಗುವಾಗಿ, ಜ್ಞಾನಿಗಳೊಡನೆ ಜ್ಞಾನಿಯಾಗಿ, ಗೋವಳರೊಡನೆ ಗೋಪಾಲನಾಗಿ, ಯುದ್ಧರಂಗದಲ್ಲಿ ರಾಜನೀತಿಜ್ಞನಾಗಿ, ಸ್ತ್ರೀಯರೊಡನೆ ಜೀವೋದ್ಧಾರಕನಾಗಿ ಸರ್ವವಿಧದಿಂದಲೂ ಸುಂದರ ಜೀವನವನ್ನು ನಡೆಸಿದ. ಎಂತಹ ಅವತಾರ!! ಅವನ ಅವತಾರದ ದಿನ ಸಂಪೂರ್ಣ ಕಲೆಗಳು ತುಂಬಿ ತುಳುಕಾಡುತ್ತವೆ.”

ಜಯನ್ತೀ ಶಬ್ದದ ನಿರ್ವಚನೆ ಏನು?


“ಜಯಂ ಪುಣ್ಯಂ ಚ ತನುತೇ ಜಯನ್ತೀಂ ತೇನ ತಾಂ ವಿದುಃ”|

ಜಯವನ್ನೂ, ಪುಣ್ಯವನ್ನೂ ಯಾವುದು ವಿಸ್ತರಿಸುವುದೋ ಅದು ‘ಜಯನ್ತೀ’. ಜಯ=ಆತ್ಮಜಯ, ಇಂದ್ರಿಯಮನೋಜಯ. ಇಂದ್ರಿಯ- ಮನಸ್ಸುಗಳನ್ನು ಸಂಯಮ ಮಾಡಿ ಅಂದರೆ ಅವುಗಳನ್ನು ಅವುಗಳ ಹಾರಾಟಕ್ಕೆ ಬಿಡದೇ ಗೆದ್ದು ಆತ್ಮನೆಡೆಗೆ-ಪರಮಾತ್ಮನೆಡೆಗೆ ಹರಿಯುವಂತೆ ಮಾಡಿ ಅವುಗಳನ್ನು ಗೆಲ್ಲುವುದು ‘ಜಯ’.

ಇನ್ನು ಪುಣ್ಯದ ಬಗ್ಗೆ ಮಹಾಕವಿ ಕಾಳಿದಾಸನ ಉಕ್ತಿ-
“ಲೋಕಾಂತರಸುಖಂ ಪುಣ್ಯಂ ತಪೋದಾನಸಮುದ್ಭವಮ್”|
ತಾನು ತ್ರಿಕರಣಪೂರ್ವಕವಾಗಿ ಮಾಡುವ ತಪಸ್ಸು ದಾನ ಇತ್ಯಾದಿಗಳಿಂದ ಒದಗಿಬರುವ ಯಾವ ಲೋಕಾಂತರಸುಖವಿದೆಯೋ ಅದು. ಈ ಜಯ ಮತ್ತು ಪುಣ್ಯಗಳನ್ನು ಬೆಳೆಸಿಕೊಂಡರೆ ಆಗ ಜಯನ್ತೀ ಆಚರಣೆ ಸಫಲ-ಸಾರ್ಥಕ.

ಶ್ರೀರಂಗಮಹಾಗುರುಗಳ ವಾಣಿಯನ್ನು ‘ಜಯನ್ತೀ’ ಶಬ್ದದ ನಿರ್ವಚನೆಯನ್ನೂ ಜೊತೆಜೊತೆಯಾಗಿ ನಮ್ಮ ಬುದ್ಧಿಭೂಮಿಗೆ ತಂದುಕೊಂಡಾಗ ‘ಜಯನ್ತೀ’ ಆಚರಣೆಯ ಮಹತ್ತ್ವ, ಹಿರಿಮೆ ಮನದಟ್ಟಾಗುತ್ತದೆ.
  " ಈ ದೃಷ್ಟಿಯಿಂದ ಈ ಶ್ರೇಷ್ಠ ಪದ ಮತ್ತು ಆಚರಣೆಯನ್ನು ತಥಾಕಥಿತ ಬುದ್ಧಿಜೀವಿಗಳು ಸತ್ಯದೂರವಾಗಿ ವಿಮರ್ಶೆ ಮಾಡುತ್ತಿರುವುದು ಶೋಚನೀಯ"
ಸಾಮಾನ್ಯ ಜನರಲ್ಲಿ ಮತ್ತು ಇವತ್ತಿನ ನಾಯಕ ವರ್ಗದಲ್ಲಿ  ತಮ್ಮ ತಾತ್ಕಾಲಿಕ ಲಾಭಕ್ಕಾಗಿ ತಲೆದೋರುವ ಇಂತಹ ಪ್ರವೃತ್ತಿಗಳು ಕೊನೆಗೊಂಡು ಇರುವ ನಿಜವನ್ನು ಅರಿಯುವ ಮನೋಭಾವವು ಬೆಳೆಯಲಿ ಎಂದು ಹಾರೈಸೋಣ.  


ಸೂಚನೆ:  16/12/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.