Monday, July 29, 2019

ಯಾರು ಈ ಕನ್ಯೆ? (Yaaru ee kanye?)

ಲೇಖಕರು: ನರಸಿಂಹ ಭಟ್ಟ

ಅನೇಕ ಸಹಸ್ರಮಾನಗಳಿಂದಲೂ ಭಾರತೀಯ ಸಂಸ್ಕೃತಿಯು ವಿಶಿಷ್ಟಸ್ಥಾನವನ್ನು ಪಡೆದುಕೊಂಡಿದೆ. ಅದಕ್ಕೆ ಕಾರಣ ಪ್ರಕೃತಿ. ‘ದ್ವಿಧಾ ಕೃತ್ವಾ ಆತ್ಮನೋ ದೇಹಮ್ ಅರ್ಧೇನ ಪುರುಷೋಽಭವತ್ ಅರ್ಧೇನ ನಾರೀ’ ಎಂದು ಉಪನಿಷತ್ತು ಕೂಡಾ ಪ್ರಕೃತಿಯ ಪ್ರಾಧಾನ್ಯವನ್ನು ಪ್ರತಿಪಾದಿಸುತ್ತದೆ. ಪ್ರಕೃತಿ ಇಲ್ಲದೆ ಪುರುಷನಿಗೆ ಚೈತನ್ಯವಿಲ್ಲ. ಆದ್ದರಿಂದ ನಮ್ಮ ಪರಂಪರೆಯೂ ಕೂಡಾ ಪ್ರಕೃತಿಗೆ ಚೈತನ್ಯದಾಯಿತ್ವವನ್ನು ಪ್ರತಿಪಾದಿಸುತ್ತದೆ. ಈ ಪ್ರಕೃತಿಯು ನಾನಾ ದೆಶೆಯನ್ನು ಪಡೆಯುತ್ತದೆ. ಅವುಗಳಲ್ಲಿ ಮೊದಲನೆಯದೇ ‘ಕನ್ಯಾ’ ಎಂದು. ಆದಕಾರಣ ಕನ್ಯೆಯ ಸ್ವರೂಪ ಸ್ವಭಾವ ಮತ್ತು ಅದರ ಕಾರ್ಯಕ್ಷೇತ್ರವನ್ನು ಅನುಸಂಧಾನ ಮಾಡಬೇಕಾಗಿದೆ.

‘ಕನ –ದೀಪ್ತೌ’ ಧಾತುವಿಗೆ ‘ಯಕ್’ ಎಂಬ ಉಣಾದಿಪ್ರತ್ಯಯವನ್ನು ಸೇರಿಸಿದಾಗ ಕನ್ಯಾ ಎಂಬ ಶಬ್ದವು ಕುಮಾರೀ ಎಂಬ ಅರ್ಥವನ್ನು ಕೊಡುತ್ತದೆ. ‘ಕನ್ಯಾಯಾಃ ಕನೀನ ಚ’ ಎಂಬ ಪಾಣಿನಿ ಸೂತ್ರಪ್ರಕಾರವಾಗಿ ಇಲ್ಲಿ ‘ಙೀಷ್’ ಎಂಬ ಸ್ರ್ತೀ ಪ್ರತ್ಯಯದ ಬದಲಾಗಿ ‘ಟಾಪ್’ ಎಂಬ ಪ್ರತ್ಯಯವು ಬರುತ್ತದೆ. ಕನ್ಯಾ ಶಬ್ದವು ಹನ್ನೆರಡು ರಾಶಿಗಳಲ್ಲಿ ಒಂದಾಗಿಯೂ ಮತ್ತು ಒಂದು ಬಗೆಯ ಓಷಧಿ ಎಂಬ ಅರ್ಥವನ್ನೂ ಸುತಾ ಮೊದಲಾದ ಅರ್ಥಗಳಲ್ಲಿಯೂ ಬಳಕೆಯಲ್ಲಿದೆ. ವಿಶೇಷವಾಗಿ ಕನ್ಯಾಶಬ್ದಕ್ಕೆ ದೀಪ್ತಿಮತೀ-ಕಾಂತಿ ಉಳ್ಳವಳು ಎಂಬ ಅರ್ಥವನ್ನು ನಾವಿಲ್ಲಿ ತೆಗೆದುಕೊಳ್ಳೋಣ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಶ್ರದ್ಧಾಳುಗಳಾದ ನಾವು ಪ್ರತಿದಿನ ಬೆಳಗ್ಗೆ ಎದ್ದು ಈ ಶ್ಲೋಕವನ್ನು ಪಠಿಸುತ್ತೇವೆ- “ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ | ಪಂಚಕನ್ಯಾಃ ಸ್ಮರೇನ್ನಿತ್ಯಂ ಮಹಾಪಾತಕನಾಶನಮ್ ||” ಎಂದು. ಈ ಕನ್ಯೆಯರು ನಮಗೆ ಆದರ್ಶರು. ಯಾಕೆ ಇಷ್ಟು ಆದರ್ಶರು? ಎಂಬುದಕ್ಕೆ ಅಷ್ಟಾಂಗಯೋಗವಿಜ್ಞಾನಮಂದಿರದ ಸಹಜಾಧ್ಯಕ್ಷರೂ ಯೋಗಿಗಳೂ ಆದ ಶ್ರೀರಂಗ ಮಹಾಗುರುಗಳು ಇವರ ಕನ್ಯಾಶ್ರೇಷ್ಠತ್ವವನ್ನು ವಿವರಿಸಿರುವುದನ್ನು ನೋಡಿದರೆ ಅವರ ಮೇಲೆ ನಮ್ಮ ಗೌರವ ಇಮ್ಮಡಿಯಾಗುವುದು. “ಸಾಮಾನ್ಯವಾಗಿ ವಿವಾಹದ ಅನಂತರದಲ್ಲಿ ಕನ್ಯೆಯರ ದೀಪ್ತಿಯು ನಶಿಸುತ್ತಾ ಹೋಗುತ್ತದೆ. ಆದರೆ ಅಹಲ್ಯಾದಿ ಈ ಕನ್ಯೆಯರ ಕಾಂತಿಯು ದಿನದಿಂದ ದಿನಕ್ಕೆ ದೇದೀಪ್ಯಮಾನವಾಗಿ ಹೋಗುತ್ತಿತ್ತು. ಇದಕ್ಕಾಗಿಯೇ ಇವರು ಪ್ರಾತಃಸ್ಮರಣೀಯರು. ಯಾರು ಆತ್ಮದೀಪ್ತಿಯ ಕಡೆಗೆ ಆಕರ್ಷಿಸುತ್ತಾರೋ  ಅವರು ಪ್ರಾತಃಸ್ಮರಣೀಯರಾಗುತ್ತಾರೆ” ಎಂಬುದಾಗಿ. ಆದ್ದರಿಂದಲೇ ಭಾರತೀಯ ಪರಂಪರೆಯು ಕನ್ಯೆಗೆ ಅನುಪಮ ಮರ್ಯಾದೆಯನ್ನು ಕೊಟ್ಟಿದೆ.

ಭಾರತೀಯರ ವಿವಾಹ ಸಂದರ್ಭದಲ್ಲಿ ಈ ವಿಷಯ ಅತ್ಯಂತ ಸ್ಪಷ್ಟವಾಗುತ್ತದೆ. ಅಲ್ಲಿ ಕನ್ಯೆಯ ತಂದೆಯಾದವನು ಈ ರೀತಿಯಾಗಿ ಸಂಕಲ್ಪ ಮಾಡುತ್ತಾನೆ. “ ಲಕ್ಷ್ಮೀರೂಪಾಮ್ ಇಮಾಂ ಕನ್ಯಾಂ ಶ್ರೀಧರರೂಪಿಣೇ ವರಾಯ ಪ್ರದಾಸ್ಯಾಮಿ’ ಎಂದು. ಕನ್ಯೆಯಲ್ಲಿ ಲಕ್ಷ್ಮಿಯನ್ನೋ ಪಾರ್ವತಿಯನ್ನೋ ಸರಸ್ವತಿಯನ್ನೊ ಭಾವಿಸುತ್ತಾರೆ. ಮತ್ತು ಎಲ್ಲಿ ಸ್ತ್ರೀಯರಿಗೆ ಸಮಾಜವು ಗೌರವಿಸುವುದೋ ಅಲ್ಲಿ ಸಕಲ ದೇವತೆಗಳೂ ನಲಿದು ನರ್ತಿಸುತ್ತಾರೆ. ಈ ಕಾರಣದಿಂದಲೇ ತಾಯಿಗೆ ಮೊದಲ ಪೂಜೆ ಸಲ್ಲುತ್ತದೆ “ಮಾತೃದೇವೋ ಭವ | ಲಕ್ಷ್ಮೀನಾರಾಯಣಾಭ್ಯಾಂ ನಮಃ ಉಮಾಮಹೇಶ್ವರಾಭ್ಯಾಂ ನಮಃ ವಾಣೀವಿಧಾತೃಭ್ಯಾಂ ನಮಃ ಅರುಂಧತೀವಸಿಷ್ಠಾಭ್ಯಾಂ ನಮಃ” ಇತ್ಯಾದಿದಾಗಿ. ಕೊನೆಯದಾಗಿ ಹೇಳುವುದಾರೆ ಕಾಂತಿಮತ್ವ ಮತ್ತು ಆತ್ಮದೀಪ್ತಿಕರ್ಷಣದಂತಹ ಅನೇಕ ಸದ್ಗುಣಗಳ ಗಣಿಯಾಗಿರುವುದರಿಂದ ಕನ್ಯೆಗೆ ಮಹತ್ವ ಬಂದಿದೆ.

ಸೂಚನೆ: ಇದರ ಮೂಲ ಸಂಸ್ಕೃತ ಲೇಖನವನ್ನು ನೋಡಲು AYVM blogs  ಉಪಯೋಗಿಸಬಹುದು.

Sunday, July 28, 2019

ஶ்ரீரங்கமஹாகுரு - 13 (Sriranga Mahaguru - 13)

 ஸ்ரீ குருவின் கண்ணோட்டம் - 2
-------------------------------------

 சித்ரகுப்தரின் ரகசியம்



“புண்யம் பாவமென்பதெல்லாம் வீண் வெட்டி பேச்சு. எங்கே உள்ளது பாவமும் புண்யமும்? மாடு, புலி வருகிறதென்றால் கண்ணுக்கு புலப்படும். பாவ புண்யங்களை பார்த்தவர் யார்? இந்த எண்ணங்களை எல்லாம் விட்டு மனதிற்கு தோன்றியபடி நடக்க வேண்டும்” என ஓர் இளைஞன் தன் பாட்டிக்கு உபதேசித்தான்.
    
 “பாவம் புண்யம் இல்லாமல் போகாது. நமக்கு காண கிடைக்காவிடினும் சித்ரகுப்தர் எல்லாவற்றையும் ரகசியமாக எழுதிக் கொள்வாரென உன் தாத்தா சொல்வார்” பாட்டி அனாயாசமாக பதில் கூறினாள்.

             இளைஞன் சிரித்து சித்ரகுப்தர் யாரென வினவ “அவர் யமதர்ம ராஜனின் குமாஸ்தா” என பதிலுரைத்தாள். “யார் கண்ணுக்கும் காணாதவர் தாத்தா கண்ணுக்கு மட்டும் தென்பட்டாரா என்ன? எப்படி நம்புவது?” என்று வினவினான் இளைஞன்.

           இந்த உரையாடலை  வித்வாம்சரும், மனம் சார்ந்த சாஸ்திரத்தில் பெரும் பண்டிதரும், நல்ல விமர்சகருமான ஒருவர் கேட்டுக்கொண்டிருந்தார். ஆன்மீகத் துறையிலும் பரிசோதனை செய்து ப்ரஹ்மஞானியான மஹா குருவிடம் சேவை செய்தவருமாவார். அவர் அந்த இளைஞனை குறித்து “`நாம் நம்பினாலும் நம்பாவிடினும் பாவ புண்யங்கள் உண்டப்பா. சித்ரகுப்தர் எழுதிக் கொள்வதும் உண்மை. சாதாரண மனிதர்கள் அதை சரியாக புரிந்து கொள்ளவில்லை. அவ்வளவுதான்.” என்றார்.

           மேலும் “நீ யாரும் அறியாமல் ஏதாவது தீய செயல் அல்லது நல்ல செயல் செய்தால் உனக்கு அது தெரிகிறதா இல்லையா?” என வினவினார். இளைஞன் “தெரிகிறது சார்” என பதிலுரைக்க “அச்செயல்களின் அடையாளம் உன் மனதில் ஏற்படுகின்றதா இல்லையா? அதாவது அச்செயல்கள் தம்முடைய முத்திரையை உன் மனதில் சித்திரிகின்றனவா?” என வினவினார். “ஏற்படுகிறது சார்” என இளைஞன் கூற “அவ்வாறு அடுத்தவர் அறியாமல் நம் மனதில்
ரகசியமாக(குப்தமாக) சித்தரிக்கும் சக்தியே சித்ரகுப்தர். அவரை நம்பாமல் இருக்க முடியுமா?அவர் எழுதிக்கொள்வதில் நல்ல செயல்களின் கணக்கே புண்ணியம் எனவும் தீயவையின் கணக்கு பாவம் எனவும் அறிய வேண்டுமப்பா” என்றார்.

       நன்றாக புரியும் மொழியில், நம்பிக்கை உண்டாகும் விதமாக உண்மையை விளக்கிய அந்த ஆசானுக்கு நன்றியுடன் தன் வணக்கங்களையும் தெரிவித்தான் அவ்விளைஞன்.

Saturday, July 27, 2019

Is it Possible to Act without Attachment?

Article in Kannada & English by: K.S. Rajagopalan



An old and a young monk were sitting on the banks of a river engrossed in their daily ascetic practices. Right in front of their eyes, a young lady slipped and fell into the river. She screamed for help as she did not know swimming. The holy men heard her scream. The older among them refrained from helping her, since touching a woman was against the code of conduct for a monk. The young ascetic however jumped into the water, rescued her, carried her on his shoulders, set her down in a secure place, and continued his practices undisturbed. The old monk, witnessing all these, was very much annoyed. He, however, controlled himself and submitted to silence. Three days passed with no exchange of communication between the two monks. Finally, the old monk could not control himself anymore. “You should not have carried her”, he yelled at the young monk. In reply, he just stared at the old monk and calmly said in a soft tone: “who is carrying her still? I have already set her down from my shoulders three days ago”. The old monk instantly realised: It was he who was carrying the lady mentally for the past three days.

It is not an easy task to comprehend the inner workings of the minds of great men by looking at their outward behaviour, as they appear to be engaged in mundane activities just like any other individual. Though they appear to be one among others, they may be unattached to worldly affairs. For example, an untrained swimmer and an expert one may look the same when they enter the water, but the former may drown while the latter can easily get out of the water.

Sriranga mahaguru used to elucidate the attitude that one should possess while dealing with life situations, by quoting the phraseपद्मपत्रमिवाम्भसा — one should be unattached, “akin to drops of water on the leaf of a lotus”. There is an oily substance on lotus leaves which does not allow water to stick to it. Such a substance is known by the Sanskrit word ‘sneha’, which also means ‘friendship’. Persons who have developed ‘Sneha’ with God can remain unattached to their worldly affairs though they appear fully involved.

In the Indian tradition, which emphatically declares that realising God (=Supreme self) is the ultimate goal of life, it is customary to begin every single deed by remembering Him. Here too, the underlying idea is that remembering God helps us to perform our actions without attachment, as a matter of practice. In the Bhagavad Gita, Sri Krishna advises Arjuna, who had to wage a war against Kauravas for the noble cause of justice (dharma), to fight while always remembering Him. (तस्मात्सर्वेषु कालेषु मामनुस्मर युध्य च |)

In dealing with life, we must of course perform all our necessary work with dedication. But let us cultivate ‘Sneha’ with the Lord, which frees us from attachment even while we perform our mundane tasks.

Note: The Kannada version of this article can be viewed at AYVM blogs

ಆನಂದಕ್ಕಾಗಿ ಎಲ್ಲಿ ಹುಡುಕಬೇಕು? (Anandakkagi elli hudukabeku?)

ಲೇಖಕರು: ನಾಗರಾಜ ಗುಂಡಪ್ಪ


ತಿಮ್ಮನೆಂಬ ಪದ್ದ ಶಿಖಾಮಣಿಯೊಬ್ಬನು “ಆನಂದ ಧಾಮ” ಎನ್ನುವ ಮನೆಯಲ್ಲಿ ಇರುತ್ತಿದ್ದನು. ಒಮ್ಮೆ ಅವನು ಪರಸ್ಥಳದಿಂದ ರಾತ್ರಿ ಬರುವಾಗ ಮನೆಯ ಬೀಗದ ಸಿಗದೇ ಗಾಬರಿಯಾಗಿ, ಹುಯಿಲೆಬ್ಬಿಸಿ, ಹುಡುಕಲಾರಂಭಿಸುತ್ತಾನೆ. 

ಊರಿನವರು ಏನಾಯಿತೆಂದು ಬಂದು ನೋಡಿದರೆ- ತಿಮ್ಮ ಗ್ರಾಮದೊಳಗಿನ ದೀಪದ ಕಂದಡಿಯಲ್ಲಿ  ಬೀಗದ ಕೈಗಾಗಿ ಹುಡುಕುತ್ತಿರುತ್ತಾನೆ. ಆಗ ಊರಿನ ವಿವೇಕಿಗಳು – “ತಿಮ್ಮ, ಸ್ವಲ್ಪ ಸಾವಧಾನದಿಂದ ನೀನು ಹೊರಟಾಗಿನಿಂದ ಏನೇನು  ನಡೆಯಿತು ಎಂದು ಯೋಚಿಸು, ಆಗ ಎಲ್ಲೆಲ್ಲಿ ಬೀಗದ ಕೈ ಕಳೆದಿರುವ ಸಾಧ್ಯತೆಯಿದೆಯೆಂದು ಯೋಚಿಸಿ ಅಲ್ಲೆಲ್ಲಾ ಹುಡುಕಲು ಸಹಾಯ ಮಾಡುತ್ತೇವೆ” ಎಂದು ಹೇಳುತ್ತಾರೆ. ಅದಕ್ಕೆ ತಿಮ್ಮ ತಕ್ಷಣವೇ– “ಅಯ್ಯೋ ಅಷ್ಟೆಲ್ಲಾ ಯೋಚಿಸಲೇ ಬೇಕಿಲ್ಲಾ;  ವಿಶ್ರಾಂತಿಗಾಗಿ ಊರ ಹೊರಗಿನ ಕಟ್ಟೆಯ ಮೇಲೆ ಕುಳಿತಿದ್ದೆ. ಸುಲಭವಾಗಿ ಸಿಗಲೆಂದು ಬೀಗದ ಕೈಯನ್ನು ಹೊರಗಿಟ್ಟುಕೊಂಡಿದ್ದೆ, ಅದು ಅಲ್ಲೇ ಬಿದ್ದು ಹೋಗಿರುತ್ತದೆ” ಎಂದು ಉತ್ತರಿಸುತ್ತಾನೆ. 

ಊರಿನ ವಿವೇಕಿಗಳು ಸೋಜಿಗದಿಂದ- ಅಲ್ಲಪ್ಪಾ, ಊರ ಹೊರಗೆ ಬೀಗದ ಕೈ ಕಳೆದು ಹೋಗಿದ್ದರೆ ನೀನು ಊರೊಳಗಿನ ದೀಪದ ಕಂದಡಿಯಲ್ಲಿ ಏಕೆ ಹುಡುಕುತ್ತಿದ್ದೀಯಾ? ಎಂದು ಕೇಳುತ್ತಾರೆ. ಅದಕ್ಕೆ ತಿಮ್ಮನು ಇವರೆಂತಹಾಮೂರ್ಖರು ಎಂದು ತನ್ನೊಳಗೇ ನಕ್ಕು ,- “ಅಷ್ಟೂ ಗೊತ್ತಾಗುವುದಿಲ್ಲವೇ? ಊರಾಚೆ ಬರೀ ಕತ್ತಲೆಯಲ್ಲವೇ? ಬೀಗದ ಕೈ ಕಾಣಬೇಕಾದರೆ ಬೆಳಕು ಬೇಡವೇ ಬೆಳಕಿರುವೆಡೆಯಲ್ಲಲ್ಲವೇ ಹುಡುಕುವುದು” ಎಂದು ಅವರಿಗೇಬುಧ್ಧಿ ಹೇಳುತ್ತಾನೆ. 

ವಿವೇಕಿಗಳು ಇವನ ಮೂರ್ಖತನಕ್ಕೆ ಮರುಗಿ, ಅವನಿಗೆ ಕಷ್ಟ ಪಟ್ಟು ತಿಳಿಹೇಳಿ, ಕೈ ದೀಪವನ್ನು ಗ್ರಾಮದ ಹೊರಗೆ ತೆಗೆದುಕೊಂಡು ಹೋಗಿ ಬೀಗದ ಕೈ ಹುಡುಕಿಕೊಟ್ಟು ತಿಮ್ಮ ಪುನಃ ಆನಂದಧಾಮವನ್ನು ಸೇರುವಂತೆಮಾಡುತ್ತಾರೆ. 

ಪ್ರತಿಯೊಬ್ಬ ಮನುಷ್ಯನ ಅಂತರಾಳದಲ್ಲೂ ಆತ್ಮ ಸಾಮ್ರಾಜ್ಯವೆಂಬ ಒಂದು ಆನಂದಧಾಮವಿದೆ; ಇದೇ  ನಮ್ಮ ಮೂಲ ಹಾಗೂ ನೆಲೆಮನೆ ಎಂದು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ನಾವು ಕರ್ಮವಶಾತ್ ಅಲ್ಲಿಂದದೂರ ಬಂದು, ಪುನಃ ಅಲ್ಲಿಗೆ ತಲಪುವ ಬೀಗದ ಕೈಯನ್ನು ಕಳೆದುಕೊಂಡು  ಆನಂದಕ್ಕಾಗಿ ಪರದಾಡುತ್ತಿದ್ದೇವೆ. ಆದರೆ,  ನಮಗೆ ಒಳನೋಟ ಇಲ್ಲದಿರುವುದರಿಂದ ಒಳ ಪ್ರಪಂಚವು ಕತ್ತಲಮಯವಾಗಿ ತೋರಿ, ಆನಂದಕ್ಕಾಗಿ ಒಳಪ್ರಪಂಚವನ್ನು ಹುಡುಕುವುದೇ ಇಲ್ಲ. ನಮಗೆ ಬೆಳಕಾಗಿ ತೋರುತ್ತಿರುವ ಹೊರ ಪ್ರಪಂಚದಲ್ಲೇ ಸಿಕ್ಕ ಸಿಕ್ಕ ಕಡೆ ಆನಂದಕ್ಕಾಗಿ ಹುಡುಕುತ್ತಿದ್ದೇವೆ. ಆದರೆ, ಆನಂದದ ನಿಧಿ ಒಳಗಿರುವುದರಿಂದ ಹೊರ ಪ್ರಪಂಚವನ್ನು ಎಷ್ಟುಹುಡುಕಿದರೂ ಸಿಗುವುದಿಲ್ಲ. 

ಆದುದರಿಂದ ವಿವೇಕಿಗಳೂ, ಮಹಾತ್ಮರೂ ಆದ ಮಹರ್ಷಿಗಳು ಕೊಟ್ಟಿರುವ ವಿವೇಕನ್ನು ಅನುಸರಿಸಿ, ನಮ್ಮ ನೋಟವನ್ನು ಒಳಮುಖವಾಗಿ ತಿರುಗಿಸಿ, ಸಾಧನೆ ಮಾಡಿದರೆ ಮೂಲ ನೆಲೆಯಾದ ಆನಂದಧಾಮವನ್ನುತಲುಪಬಹುದು. ಹೀಗೆ ಜ್ಞಾನಿಗಳ ಮಾರ್ಗದರ್ಶನವೆಂಬ ಕೈದೀವಿಗೆಯ ಸಹಾಯದಿಂದ ಆನಂದಧಾಮದ ಬೀಗದ ಕೈಯನ್ನು ಹುಡುಕಿ ಅಲ್ಲಿನ  ಆನಂದವನ್ನನುಭವಿಸಿ ಇತರರಿಗೂ ಹಂಚಿ ಸಮಾಜವೇ ಶಾಂತಿಸಮೃದ್ಧಿಗಳಿಂದ ತುಂಬುವಂತೆ ಮಾಡುವ ದಿಕ್ಕಿನಲ್ಲಿ ಸಾಗೋಣ.

ಸೂಚನೆ:  27/07/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

ಸಂಸ್ಕಾರ ಲೇಖನಮಾಲಿಕೆ - ಉಪಸಂಹಾರ (Samskara lekhanamalike - upasamhara)

ಲೇಖಕರು: ತಾರೋಡಿ ಸುರೇಶ 



ಈ ಲೇಖನಮಾಲೆಯಲ್ಲಿ ವಿವಿಧ ಸಂಸ್ಕಾರಗಳ ಕಿರುಪರಿಚಯವನ್ನು ನೋಡಿದೆವು. ಈಗ ಅದಕ್ಕೆ ಒಂದು ಮಂಗಳವನ್ನು ಹಾಡಬೇಕಿದೆ. ಸಂಸ್ಕಾರ ಎನ್ನುವ ಪದವು ಅನೇಕ ಅರ್ಥಗಳಲ್ಲಿ ಬಳಸಲ್ಪಡುತ್ತಿದೆ. ಪರಿಷ್ಕಾರ,ಶುದ್ಧಿ,ಉತ್ಕರ್ಷ, ವಿದ್ಯೆ ಇತ್ಯಾದಿ. ಆದರೆ ಇಂದು ಶ್ರದ್ಧೆಯ ಕೊರತೆ, ಮರ್ಮರಾಹಿತ್ಯದಿಂದಾಗಿ ಶಾಸ್ತ್ರಕ್ಕಾಗಿ ಮಾಡಿ ಮುಗಿಸುವುದಾಗಿದೆ. ಕರ್ಮದಲ್ಲಿ ಒಂದು ರುಚಿಯನ್ನು ಅನುಭವಿಸುತ್ತಿಲ್ಲ. ಸಂಸ್ಕಾರವೆಂದರೇನು? ಮೌಲಿಕವಾಗಿ ಶುದ್ಧಿ ಎಂದರ್ಥ. ಕೊಳೆಯನ್ನು ತೆಗೆದು ಹೊಳೆಯುವಂತೆ ಮಾಡುವುದು. ಮೂಲರೂಪಕ್ಕೆ ತರುವುದು. “ಸ್ವಸ್ವರೂಪಕ್ಕೆ ಬರುವಂತೆ ಮಾಡುವುದು” ಎಂದು ಶ್ರೀರಂಗಮಹಾಗುರುಗಳು ನುಡಿಯುತ್ತಿದ್ದರು. ಯಾವುದಕ್ಕೆ ಸಂಸ್ಕಾರ? ದೇಹ, ದ್ರವ್ಯಗಳು, ಸಪ್ತಧಾತುಗಳು ಮತ್ತು ಮನಸ್ಸಿಗೆ. ಕೆಲವರು ಆತ್ಮನಿಗೂ ಉಂಟು ಎನ್ನುತ್ತಾರೆ. ಇಲ್ಲಿ ಆತ್ಮನ ಸ್ಮೃತಿ ಬರುವುದೇ ಆತ್ಮನಿಗೆ ಶುದ್ಧಿ. ಪರಮಾತ್ಮಸಾಕ್ಷಾತ್ಕಾರದ ಲಾಭ. ಎಲ್ಲ ಶುದ್ಧಿಗೂ ಆತ್ಮಜ್ಞಾನದಲ್ಲಿಯೇ ತಾತ್ಪರ್ಯ. 16 ಸಂಸ್ಕಾರಗಳು. ಇವುಗಳನ್ನು ವಿಸ್ತರಿಸಿ 40 ಸಂಸ್ಕಾರಗಳು ಎನ್ನುತ್ತಾರೆ. ಕೊನೆಯಲ್ಲಿ ಅನಂತ ಸಂಸ್ಕಾರಗಳಿವೆಯೆಂದು ಶಾಸ್ತ್ರವು ಹೇಳುತ್ತದೆ. ಅನಂತವಾದ ದೋಷಗಳು ಏರ್ಪಡುಬಹುದಾದ್ದರಿಂದ ಚಿಕಿತ್ಸೆಯೂ ಅಷ್ಟು ಬಗೆಯಲ್ಲಿರುವುದು ಸಹಜವೇ. ಪೂರ್ವ ಮತ್ತು ಅಪರ ಎಂದೂ ವಿಭಾಗವಿದೆ. ದಯೆ, ಕ್ಷಮೆ, ಅನಸೂಯಾ, ಶುಚಿ, ಅನಾಯಾಸ, ಮಂಗಲ, ಅಕಾರ್ಪಣ್ಯ ಮತ್ತು ಅಸ್ಪೃಹತೆ- ಇವುಗಳನ್ನು ಆತ್ಮಗುಣಗಳೆಂದು ಋಷಿಗಳು ಕರೆದಿದ್ದಾರೆ. ಸಂಸ್ಕಾರಗಳಿಂದ ಆತ್ಮಗುಣಗಳ ಪ್ರಾಪ್ತಿ. ಆತ್ಮಗುಣದಿಂದಾಗಿ ಬ್ರಹ್ಮಪದ ಮತ್ತು ಸದ್ವಂಶ.

ಎಲ್ಲ ಜೀವಿಗಳಿಗೂ ಸಂಸ್ಕಾರ ಬೇಕು. ಆದರೆ ಪರಮಹಂಸ ಸನ್ಯಾಸಿಗೆ ಅಗತ್ಯವಿಲ್ಲದಿದ್ದರೂ ಅಂತ್ಯಸಂಸ್ಕಾರ ನಡೆಸುವುದು ಕರ್ತೃವಿಗೆ ಶ್ರೇಯಸ್ಕರ. ಕೆಲವು ಸಂಸ್ಕಾರಗಳನ್ನು ಪತಿ ಅಥವಾ ತಂದೆಯೇ ಮಾಡಬೇಕು. ಅಂತ್ಯಸಂಸ್ಕಾರವನ್ನು ಬೇರೆಯವರು ಮಾಡಬೇಕಾಗುವುದು. ಉಪನಯನವನ್ನು ತಂದೆ ಅಥವಾ ಆಚಾರ್ಯನು ಮಾಡುತ್ತಾನೆ. ಒಟ್ಟಾರೆ ಕಾರ್ಯಕ್ರಮದಲ್ಲಿ ಭಾಗವಹಿಸುವವರು, ಬಂಧುಮಿತ್ರರು, ಎಲ್ಲರಿಗೂ ಸಂಸ್ಕಾರ. ಸಂಪ್ರದಾಯಗಳಲ್ಲಿ ಕೆಲವುವ್ಯತ್ಯಾಸಗಳಿರುತ್ತವೆ.ಈ ಸಂಸ್ಕಾರಗಳನ್ನು ಸಮಂತ್ರಕವಾಗಿಯೂ ಹಾಗೆಯೇ ಅಮಂತ್ರಕವಾಗಿಯೂ ಆಚರಿಸುವುದುಂಟು. ಮಂತ್ರ-ತಂತ್ರ-ದ್ರವ್ಯ ಇವುಗಳೆಲ್ಲದಕ್ಕೂ ತಕ್ಕ ಪಾತ್ರವಿದೆ. ಒಂದೊಂದನ್ನೂ ಋಷಿಗಳು ಕೊಟ್ಟ ಕ್ರಮದಲ್ಲಿ ವಿನಿಯೋಗಿಸಬೇಕು. “ಮರ್ಮವರಿತು ಕರ್ಮವನ್ನಾಚರಿಸೀಪ್ಪ” ಎಂಬುದು ಶ್ರೀರಂಗಮಹಾಗುರುಗಳ ವಾಣಿ.

ಸ್ನಾನ, ಸಂಕಲ್ಪಗಳು, ಮಹಾಗಣಪತಿಪೂಜೆ, ನಾಂದೀಶ್ರಾದ್ಧ, ಮಾತೃಗಣಪೂಜೆ, ಪುಣ್ಯಾಹವಾಚನ ಮುಂತಾದ ಪೂರ್ವಕ್ರಿಯೆಗಳ ನಂತರ ಸಂಸ್ಕಾರಗಳನ್ನು ಆಚರಿಸಬೇಕು. ಗರ್ಭಾಧಾನ, ಪುಂಸವನ, ಸೀಮಂತೋನ್ನಯನ, ಜಾತಕರ್ಮ, ನಾಮಕರಣ, ನಿಷ್ಕ್ರಮಣ, ಅನ್ನಪ್ರಾಶನ, ಚೂಡಾಕರ್ಮ, ಉಪನಯನ, ನಾಲ್ಕು ವೇದವ್ರತಗಳು, ಸ್ನಾನ, ವಿವಾಹ ಮತ್ತು ಅಂತ್ಯೇಷ್ಟಿ-ಇವೇ ನಿಷೇಕಾದಿ ಸ್ಮಶಾನಾಂತವಾಗಿರುವ 16 ಪ್ರಧಾನ ಸಂಸ್ಕಾರಗಳು. ಅನ್ಯಾನ್ಯ
ಗೃಹ್ಯಸೂತ್ರಕಾರರು ಬೇರೆಬೇರೆ ಸಂಖ್ಯೆಗಳನ್ನು ಹೇಳಿದ್ದಾರೆ.ಒಂದು ಗುಂಪಿನಲ್ಲಿ ಒಂದೆರಡು ಇಲ್ಲದಿದ್ದರೆ ಅದನ್ನು ಇನ್ನೊಂದು ಗುಂಪಿನಲ್ಲಿ ಸೇರಿಸಿರುತ್ತಾರೆ. ಪರಮಾತ್ಮಸುಖ, ಆತ್ಮಗುಣ, ಸದ್ವಂಶ ಇವುಗಳ ಪ್ರಾಪ್ತಿಗಾಗಿಯೂ, ಉತ್ತಮ ಸಮಾಜಕ್ಕಾಗಿಯೂ ಸಂಸ್ಕಾರಗಳು ಅತ್ಯವಶ್ಯ. ದಿನಚರಿ, ಹಬ್ಬ-ವ್ರತಗಳರೂಪದಲ್ಲಿ ವಾರ್ಷಿಕ ಚರ್ಯೆ ಹಾಗೂ ಜನನಾರಭ್ಯ ಮೃತ್ಯುವಿನವರೆಗೆ ಸಂಸ್ಕಾರಗಳು-ಹೀಗೆ ಪುರುಷಾರ್ಥಮಯವಾದ ಬಾಳಾಟವನ್ನು ರೂಪಿಸಿಕೊಟ್ಟ ಮಹರ್ಷಿಭಾರತಕ್ಕೆ ನಮೋನಮಃ  

ಸೂಚನೆ: 27/07/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Thursday, July 25, 2019

ஶ்ரீரங்கமஹாகுரு - 28 (Sriranga Mahaguru - 28)

ஶ்ரீகுருவின் கண்ணோட்டம் – 17  

      குழந்தை – தங்கம் - மிட்டாய்                  

-------------------------------------------------------------------------------------------------------

ஸ்ரீ சாயாபதி என்பவர் எழுதியதின் தமிழாக்கம் -- திருமதி ஜானகி




தாய்மார்கள் தங்கள் குழந்தைகளுக்கு  மகிழ்ச்சிக்காகவும், அலங்காரத்திற்காகவும்  தங்க நகைகளை அணிவிப்பது வழக்கம். மோதிரம், வளையல், தோடு முதலியவைகளை சின்னஞ்சிறு குழந்தைகளுக்கு அணிவிப்பது அழகு. ஆனால் விளையாட்டு பருவ குழந்தைகள் அணிந்திருப்பதை கண்டு அதை அபகரிக்கும் வஞ்சகர்களும் உண்டு. சிலர் கொடூரமான முறைகளை கைகொண்டால் பலர் அன்பாக வஞ்சிக்கிறார்கள்.
       
சிறுவர்கள் விரும்பும் விளையாட்டு பொருட்கள், மிட்டாய் முதலிய இனிப்புகளை கொடுத்து அணிகலன்களை அபகரிக்கும் கதைகளை கேட்கிறோம். அவ்வாறு தங்கள் தோடு, மோதிரங்களை கொடுத்து மிட்டாய் போன்ற இனிப்புகளை பெற்ற குழந்தைகள் தாம் அதிக லாபத்தை அடைந்தோம் என உற்சாகமாக கூறுவதும் உண்டு.
      
 தங்கத்தின் விலை மதிப்பறியாத மழலைகள். மிட்டாயின் சுவையே அவர்களுக்கு தங்கத்தை விட இனியது. தங்கத்தின் விலை அறியமுடியாமல் மோசம் போய் மிட்டாயின் விலையே அதிகமென மகிழ்கின்றன அக்குழந்தைகள்.
            
அவ்வாறே இந்திரியங்களின் ஈர்ப்புக்கு உட்பட்ட  ஜீவன் அதை காட்டிலும் மேலான இன்சுவையை அறிவதில்லை. அதையும் மீறிய சுகம், மனநிறைவு உண்டென்று ஆன்றோர் உரைத்திடினும் மனம் அதை நாடுவதில்லை.
            
 இந்திரியங்கள் எனும் திருடர்கள் தங்கள் கீழ்தரமான சுவையை காட்டி ஜீவன் அச்சுவைகளுக்கும்  மூலமான, தங்கமயமான ஆத்மனிடம் செல்லாமல் தடுத்து விடுகின்றன. ஜீவன் இந்திரியங்களின் சுவைக்கு தோற்காமல் மனம் பின்நோக்கி மூலத்தில் லயித்து சுவர்ண(தங்க) மயமான ஜோதியை கண்டதும்  இந்த்திரியசுவை  அற்பமானது என அறிகிறது. அப்போது அச்சுவைக்கு ஆளாகி தன் வாழ்வின் தங்கத்தை பறிகொடுப்பதில்லை.
        
 குழந்தை மிட்டாய்க்கு மயங்கி  தங்கத்தை  இழப்பதுபோல்  புலன்களின் வயப்பட்ட மனிதன் தன் வாழ்வின் இணையற்ற செல்வத்தை இழக்கிறான்.  வாழ்கையின் உண்மையான மதிப்பை உணரும் பொழுது தான் இந்திரியங்களின் கீழ்த்தரமான சுவைகளுக்கு ஜீவன் ஆளாக மாட்டான்.

Tuesday, July 23, 2019

अहिंसा परमो धर्मः (Ahimsa paramo dharma:)

लेखक : बी.जी. अनंत 
हिन्दी अनुवाद : अर्चना वागीश 



भारतीय शास्त्रों का यह कहना हैं – “मा हिंस्यात् सर्व भूतानि” यानि- किसी जीव या जंतु पर हिंसा मत करना | हिंसा का मतलब है मुसीबत |  हिंसा  छोटी स्तर की दैहिक या मानसिक घासी पहूँचाने  से लेकर  प्राणघातक तक कुछ भी हॊ सक्ता हैं ।  इसी प्रकार, अगर हम किसी को भी चोट पहुंचाए बिना जीवन व्यतीत करें तोह इस तरह जीने के  विधान को “अहिंसा” कहा जाता है | भारतीय महर्षियों के अनुसार, अहिंसा  आत्मगुणों में श्रेष्ठ माना जाता है | अहिंसा न केवल मनुष्यों या जानवरों और पक्षियों से सम्बंधित है, बल्कि, जड़ सामान जो पेड़, पौधे, लताएं, पत्थर, लकड़ियां और मिटटी पर भी लागू है | क्यों के भारतीय दर्शन के अनुसार- यह सब भी जीव हैं | इस मोड़ पे एक प्रश्न उठता  है के हम कैसे जीवन व्यतीत करें ? क्यों के एक प्रसिद्द कहावत है-“जीवो जीवस्य जीवनम्”| यानि - जीव दूसरे जीव का उपयोग करके जीते हैं | ऐसे कहने पर, क्या यह सम्भव है कि हम सौ प्रतिशत किसी को चोट पहुंचाए बिना अहिंसक जीवन व्यतीत कर सकें? इस प्रश्न के बारे में महर्षियां अज्ञात नहीं थे | इन सब विचारों के बावजूद भी महर्षियां अहिंसा के बारे में ऐसा अभिप्राय रखते हैं? – हमें समझना है कि, इस के पीछे एक गहरा वैज्ञानिक सोच  छुपा हुआ है |

एक हिंसा दूसरी हिंसा का कारण बनता है | जैसे कि, एक आदमी एक जानवर को अगर मार देता है | आगे जा कर, वह ही जानवर एक आदमी का जन्म लेती है | और वह आदमी एक जानवर का जन्म लेता है | हमारे शास्त्र कहते हैं कि पिछले जन्म में जिस हिंसा का शिकार वह जानवर बना था, इस जन्म में वही जानवर, एक आदमी का जन्म लेकर, उस ही जीव पर वही हिंसा करेगी | इसके अतिरिक्त, वह हिंसाका कार्य, वातावरण में अनपेक्षित भय की तरंग को सृष्टि करता हैं | वह हिंसित जानवर जो संकट का अनुभव करता है– उससे ही यह तरंग उत्पत्ति होती हैं |  जिससे वह मनुष्य के मन में भी एक लहर प्रकट होता है | यह अनुभव सिर्फ एक क्षण भर होकर भी, उस मनुष्य के शांति के ऊपर असर पड़ता है | इसके कारण, उसके मन में शांति और सुख के अनुभव कुछ समय के लिए लुप्त हो जाति हैं | इसी लिए योग शास्त्र का यह कहना है कि जो लोग ध्यान की अभ्यास रखते हैं उन्हें जितना संभव हो सके, उतना हिंसा को छोड़ देना ही उचित है |

हमने पहले यह देखा कि हिंसा के माध्यम से ही आहार मिलता हैं | परन्तु, जितना आवश्यक हो उतना आहार पाने के लिए, अगर हिंसा करें तो उससे ज्यादा दुष्परिणाम नहीं होता | फिर भी, हो सके तोह ऐसा आहार चुनें जिसके लिए कम से कम हिंसा की आवश्यकता हो- ऐसा जानकार लोगों की राय हैं | इस के अलावा, आहार में यह दोष की उपस्थिति के कारण से ही- आहार का सेवन करने से पहले उसे  भगवान को अर्पित करते हुए, भगवान के स्मरण के साथ, उस आहार को प्रसाद की रूप में स्वीकार करने की रिवाज़ है | इस तरह, कुल मिलाकर, आहार के माध्यम से पाप जमा होता हैं | इसीलिए,  उदरभरण  के लिऎ जितनाअव्श्यक हॊ, उतना ही आहार सेवन करने का नियम बनाया गया है | आहार जीव के प्रतिरूप हैं- वह अगर प्राणी के मांस रूप में हो या पौधे या अनाज के रूप में हो |

और भी, जब एक आत्मज्ञानी आहार का सेवन करता हैं, उस आहार को सीधा भगवान को समर्पित करता है | ऐसे करने से, उस आहार के सम्बंधित सभी जीवों को सद्गति प्राप्त होति  हैं- ऐसे योगीजनों का कहना हैं | इसलिए, इस कार्य में हिंसा का कोई दोष नहीं है |


सूचन : इस लेख का कन्नड़ संस्करण AYVM ब्लॉग पर देखा जा सकता है I

ಮನುಷ್ಯನ ನಿಜ ಯೋಗ್ಯತೆಯನ್ನರಿತು ಬಾಳೋಣ (Manushyana nija yogyatheyannaritu baalona)

ಲೇಖಕರು: ವಿಜಯಲಕ್ಷ್ಮೀ ಬಿ. ಆರ್, 
ಬೆಂಡೇಹಕ್ಲು, ಚಿಕ್ಕಮಗಳೂರು 


“ಸಮಜ” ಎಂದರೆ ಪ್ರಾಣಿಗಳ ಗುಂಪು, “ಸಮಾಜ” ಎಂದರೆ ಸಮಾನ ಧರ್ಮವುಳ್ಳ ಮನುಷ್ಯರ ಸಂಘ ಎಂದರ್ಥ.ಶ್ರೀರಂಗ ಮಹಾ ಗುರುಗಳು ಹೇಳುತ್ತಿದ್ದರು -ಮನುಷ್ಯಜೀವನದಲ್ಲಿ ಮೂರು ಕ್ರಮಗಳುಂಟು. ಒಂದು ನಿಸರ್ಗದ ವೇಗಕ್ಕೆ ತಕ್ಕಂತೆ ನಡೆಯುವುದು. ಎರಡನೆಯದು ನೆರೆಹೊರೆಯವರನ್ನು ನೋಡಿ ಅನುಕರಣೆ ಮಾಡುವುದು. ಇವೆರಡರಲ್ಲೂ ವಿಮರ್ಶೆ ಇಲ್ಲ. ಮೂರನೆಯದು ವಿಚಾರಪೂರ್ವಕವಾಗಿ ಒಂದು ಧ್ಯೇಯವನ್ನಿಟ್ಟುಕೊಂಡು, ನಿಸರ್ಗದ ನಡೆಯನ್ನೂ ಗಮನಿಸಿ ಜೀವನ ಮಾಡುವುದು. ಜೀವನವನ್ನು ಪ್ರಾಣಿ-ಪಕ್ಷಿಗಳೂ ಮಾಡುತ್ತವೆ. ನಾವೂ ಮಾಡುತ್ತೇವೆ. ಮನುಷ್ಯರು ಬುದ್ಧಿಜೀವಿಗಳು, ಮಾತನಾಡುವ ಶಕ್ತಿಯುಂಟು, ಮುಂದಾಲೋಚನೆಯುಂಟು, ಯೋಚನಾಶಕ್ತಿಯುಂಟು, ಪ್ರಾಣಿಗಳನ್ನು ಬಗ್ಗಿಸಿ ಹತೋಟೀಯಲ್ಲಿಟ್ಟುಕೊಳ್ಳುತ್ತಾರೆ - ಮುಂತಾಗಿ ನಾವು ಹೆಮ್ಮೆಪಡುತ್ತೇವೆ. ಆದರೆ ಪಶುಪಕ್ಷಿಗಳ ಜೀವನದ ಮಹತ್ವದ ಅಂಶವನ್ನು ಗಮನಿಸೋಣ: 

ಜೇನುಹುಳು, ಗೀಜಗ, ದುಂಬಿ, ಜೇಡ ಮುಂತಾದವುಗಳನ್ನು ಗಮನಿಸಿದಾಗ ಅವು ತುಂಬ ವ್ಯವಸ್ಥಿತವಾಗಿರುವುದನ್ನು ಕಾಣಬಹುದು. ಇರುವೆಗಳು ಚಾತುರ್ಯದಿಂದ ಆಹಾರ ಸಂಗ್ರಹ ಮಾಡುತ್ತವೆ. ಪಶು ಪಕ್ಷಿಗಳು ಆಹಾರದ ಉಪಯೋಗದಲ್ಲೂ ನಮ್ಮಂತೆ ಹೆಚ್ಚುತಿಂದು ಅಜೀರ್ಣ ಮಾಡಿಕೊಳ್ಳುವುದಿಲ್ಲ. ಮರಿಗಳನ್ನು ತುಂಬ ಆಸ್ಥೆಯಿಂದ ಪಾಲಿಸುತ್ತವೆ. ಶಿಸ್ತಿನ ವಿಚಾರ ತೆಗೆದುಕೊಂಡರೆ ಸಕಾಲದಲ್ಲಿ ಏಳುತ್ತವೆ, ದುಡಿಯುತ್ತವೆ, ಸ್ನಾನಮಾಡುತ್ತವೆ, ಸಕಾಲದಲ್ಲಿ ಗೂಡು ಸೇರುತ್ತವೆ. ಕೌಶಲದಿಂದ ಬೇಟೆಯಾಡುತ್ತವೆ. ಪರೇಂಗಿತಜ್ಞಾನಕ್ಕೆ ಕುದುರೆ, ನಾಯಿ, ಗಿಳಿ, ಪಾರಿವಾಳಗಳು, ಶಿಕ್ಷಣ ಮತ್ತು ತಾಯಿತನದ ನಿರ್ವಹಣೆಗೆ ಕೋಳಿ, ಬೆಕ್ಕು ಮುಂತಾದವುಗಳಲ್ಲಿನ ಸಾಮರ್ಥ್ಯವನ್ನು ಗಮನಿಸಬಹುದು. ಸ್ವಾವಲಂಬಿ ಜೀವನ, ಸ್ವಾಮಿನಿಷ್ಠೆ, ಕೃತಜ್ಞತೆ, ಸ್ಮರಣಶಕ್ತಿ, ಗುರುತು ಹಿಡಿಯುವಶಕ್ತಿ, ಅನುಕರಣಕಲೆಗಳನ್ನು ಪಶು-ಪಕ್ಷಿಗಳಲ್ಲಿಯೂ ಕಾಣಬಹುದು. ಕಲಿತ ವಿದ್ಯೆಗಳನ್ನೆಲ್ಲ ಜೀವನಕ್ಕೆ ಬಳಸಿಕೊಳ್ಳುತ್ತವೆ. ಯಾವುದರಲ್ಲೂ ಅವು ಮನುಷ್ಯುರಿಗಿಂತ ಕಡಿಮೆ ಇಲ್ಲ. ಕೋಗಿಲೆಯಂತೆ ಧ್ವನಿ, ನವಿಲಿನಂತೆ ನಡಿಗೆ ಮುಂತಾದ ನುಡಿಗಳೂ “ಸಮಜ”ದ ಹಿರಿಮೆಯನ್ನೇ ಸಾರುತ್ತವೆ. ಜಾಗ್ರತ್-ಸ್ವಪ್ನ-ನಿದ್ರೆ ಮೂರು ಸ್ಥಿತಿಗಳು ನಮ್ಮಂತೆಯೇ ಅವುಗಳಿಗೂ ಉಂಟು

ಮಾನವಜನ್ಮದ ಹಿರಿಮೆ: 

ಹಾಗಾದರೆ “ಮಾನವ ಜನ್ಮ ದೊಡ್ಡದು”, “ಜಂತೂನಾಂ ನರಜನ್ಮ ದುರ್ಲಭಂ” ಎಂಬ ಜ್ಞಾನಿಗಳ ಮಾತಿಗೇನರ್ಥ ಎಂಬುದು ವಿಚಾರಣೀಯವಾಗಿದೆ. ಮನುಷ್ಯನಲ್ಲಿ ಎಚ್ಚರದ ಸ್ಥಿತಿ –ಸ್ವಪ್ನ ಮತ್ತು ಗಾಢ ನಿದ್ರೆ  ಈ ಮೂರು ಸ್ಥಿತಿಗಳು ಇಂದ್ರಿಯಕ್ಷೇತ್ರಕ್ಕೆ ಸಂಬಂಧಪಟ್ಟವು. ಆದರೆ ಇವನ್ನೂ ಮೀರಿದ ಮತ್ತೊಂದು ಸ್ಥಿತಿ ಇದೆ. ಅದನ್ನು ಅನುಭವಿಸಿದವರು ಅದನ್ನು “ ತುರೀಯಾ” ನಾಲ್ಕನೆಯ ಸ್ಥಿತಿ ಎಂದಿದ್ದಾರೆ. ಅದರ ಆನಂದ ಯಾವ ಹೋಲಿಕೆಗೂ ಸಿಗದಿರುವುದರಿಂದ ಈ ಹೆಸರು. ಅದೇ  ಸಮಾಧಿಸ್ಥಿತಿಯೂ ಸಹ. ಇದರಲ್ಲಿ ದೊರೆಯುವುದು ಪೂರ್ಣವಾದ, ಶುದ್ಧವಾದ, ನಿತ್ಯವಾದ, ಪರಾವಲಂಬನೆ ಇಲ್ಲದ, ಸಹಜ ಸುಖ. ಈ ನಾಲ್ಕೂ ಸ್ಥಿತಿಯನ್ನು ಅನುಭವಿಸುವ, ಆನಂದಿಸುವ ಹಕ್ಕು ಮತ್ತು ಯೋಗ್ಯತೆ ಮನುಷ್ಯನಿಗೆ ಮಾತ್ರ. ಪ್ರಾಣಿಗಳಿಗೆ ಇಲ್ಲ.  ಈ ನಾಡಿನ ಮಹರ್ಷಿಗಳು ಮನುಷ್ಯನು ಈ ನಾಲ್ಕೂ ಸ್ಥಿತಿಗಳನ್ನು ಅನುಭವಿಸಿ ಸುಖಿಸಲು ಉಪಾಯವನ್ನು  ಕಂಡರುಹಿದರು. ಅವೇ ಧರ್ಮ,ಅರ್ಥ ಕಾಮ ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳು.

 ನಾಲ್ಕು ಪುರುಷಾರ್ಥಗಳನ್ನು ಜೀವನದಲ್ಲಿ ಸಾಧಿಸಿ ಇನ್ನಿಲ್ಲದ ಸುಖ, ನೆಮ್ಮದಿಯನ್ನು ಪಡೆಯುವ ಚಿಂತನೆ ಇರುವ ಮನುಷ್ಯರ ಗುಂಪನ್ನೇ “ಸಮಾಜ “ ಎಂದಿರುವುದು. ಆಹಾರ ನಿದ್ರಾ ಭಯ ಮೈಥುನಂ ಚ ಸಾಮಾನ್ಯಮೇತತ್ ಪಶುಭಿರ್ನರಾಣಾಮ್ – ಆಹಾರ, ನಿದ್ರೆ,ಭಯ,ಮೈಥುನ ಇವುಗಳು ಪ್ರಾಣಿಗಳಿಗೆ ಮತ್ತು ಮನುಷ್ಯನಿಗೆ ಸಾಮಾನ್ಯ ಸ್ಥಿತಿಗಳು. ಮತ್ತೆ ಇವನ ವಿಶೇಷವೇನೆಂದರೆ-ಧರ್ಮೋ ನರಾಣಾಮ್  ಅಧಿಕೋ ವಿಷೇಶಃ, ಜ್ಞಾನಂ ನರಾಣಾಮ್  ಅಧಿಕೋ ವಿಷೇಶಃ  ಧರ್ಮ, ಜ್ಞಾನಗಳೇ ಮನುಷ್ಯನ ವಿಶೇಷತೆ. ಅದಿಲ್ಲದಿದ್ದರೆ ಅವನು ಪಶು ಸಮಾನ ಎಂದಿವೆ ನಮ್ಮ ಶಾಸ್ತ್ರಗಳು. ಹಾಗೆಂದೇ ಸರ್ವ ಪ್ರಯತ್ನದಿಂದಲೂ ಧರ್ಮ, ಜ್ಞಾನಗಳನ್ನು ಸಂಪಾದಿಸಿ ಸುಖದಿಂದಿರುವುದೇ ಮನುಷ್ಯ ಜನ್ಮದ ಸಾರ್ಥಕ್ಯ ಎಂಬ ಶ್ರೀರಂಗಮಹಾಗುರುಗಳ ವಿಚಾರವನ್ನು ಮರೆಯದಿರೋಣ.  

ಸೂಚನೆ: 23/07/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, July 21, 2019

ಪೂಜೆ-ಒಂದು ಪರಿಚಯ (Pooje -ondu parichaya)

ಲೇಖಕರು: ತಾರೋಡಿ ಸುರೇಶ


ಪೂಜೆಯನ್ನು ದೇವಪೂಜೆ, ದೇವತಾರ್ಚನೆ ಆರಾಧನೆ ಎಂದೆಲ್ಲ ವಿವಿಧವಾಗಿ  ಕರೆಯುವುದುಂಟು. ವೇದದಲ್ಲಿಯೂ ಅರ್ಚನೆ ಎಂಬ  ಪದವನ್ನು ನೋಡುತ್ತೇವೆ. ಭಗವಂತನಿಗೂ ತನಗೂ ಐಕ್ಯವನ್ನುಂಟುಮಾಡಿ, ಅವನ ಒಂದು ಭಾಗವಾಗಿ ಉಳಿದುಕೊಳ್ಳುವ ಕೃತಿಗೆ ಪೂಜೆ ಎಂದು ಹೆಸರು.

ಪ್ರಕೃತಿಯನ್ನು ದಾಟಿ, ಪರಮಪುರುಷನಲ್ಲಿ ಸೇರಿಕೊಳ್ಳುವುದು ಜೀವಿಯ ಜನ್ಮಸಿದ್ಧ ಹಕ್ಕು. ಆದ್ದರಿಂದ ಪೂಜೆಯಲ್ಲಿ ಜೀವ, ದೇವ ಮತ್ತು ಪ್ರಕೃತಿ ಮೂರೂ ಸೇರುತ್ತವೆ. ಈ ಮೂರೂ ಅನಾದಿಯಾಗಿರುವುದರಿಂದ ಪೂಜೆಯೂ ಅನಾದಿಯೇ.ಅದಕ್ಕೆ ಸಂಬಂಧಪಟ್ಟ ಸಾಹಿತ್ಯ ಇಂದಿನದೋ, ಹಿಂದಿನದೋ ಆಗಬಹುದು ಅಷ್ಟೆ.

ವಾಸ್ತವಿಕವಾಗಿ ಧ್ಯಾನವೇ ಪೂಜೆ. ಅದರಿಂದಲೇ ಜೀವ-ದೇವರ ಸಂಯೋಗ. ಊಹಿಸಲಾಗದ ಆನಂದ ತುಂಬುವುದು. ಇದಕ್ಕೆ ಬೇಕಾದದ್ದು ಜೀವ ಮತ್ತು ದೇವ ಇಬ್ಬರೇ. ಆದರೆ ಪ್ರಕೃತಿಯಲ್ಲಿ ಭಗವಂತನು ಸೃಷ್ಟಿಸಿದ ಅತ್ಯದ್ಭುತವಾದ ಪದಾರ್ಥಗಳೂ ಇವೆ. ಅವುಗಳ ಸೃಷ್ಟಿಯ ವಿಧಾನ, ವಿಜ್ಞಾವನ್ನರಿತು, ಭಕ್ತಿ, ಶ್ರದ್ಧೆಗಳಿಂದ ಪುನಃ ದೇವದೇವನಲ್ಲಿ ಆ ಪದಾರ್ಥಗಳನ್ನು ಸಮರ್ಪಿಸಿದರೆ ಅದೂ ಪೂಜೆಯೇ.

ಕೇವಲ ಮೋಕ್ಷಕ್ಕೋಸ್ಕರ ಪೂಜೆ ಮಾಡುವವರುಂಟು. ಜೊತೆಗೆ ಧರ್ಮಾರ್ಥಕಾಮಗಳೂ ಸಿದ್ಧಿಸಬೇಕೆಂದು ಪೂಜಿಸುವವರೂ ಉಂಟು. ಯೋಗ-ಭೋಗವೆರಡೂ  ಜೀವದ ಸೃಷ್ಟಿಸಹಜವಾದ ಅಪೇಕ್ಷೆಗಳೇ. ಆದ್ದರಿಂದಲೇ ನಮ್ಮ ಪೂರ್ವಜರಾದ ಋಷಿಮಹರ್ಷಿಗಳು ಪುರುಷಾರ್ಥಮಯವಾದ ಬಾಳಾಟದ ವ್ಯವಸ್ಥೆಯನ್ನು ಆದರ್ಶವಾಗಿಟ್ಟರು.

ಪೂಜೆಯನ್ನು ಯಾರು ಮಾಡಬಹುದು? ಆಹಾರವನ್ನು ಯಾರು ಸ್ವೀಕರಿಸಬಹುದು ಎಂದು ಕೇಳಿದಂತೆಯೇ ಸರಿ ಇದು. ಪೂಜೆಯು ಎಲ್ಲ ಜೀವಿಗಳ ಆಜನ್ಮಸಿದ್ಧ ಹಕ್ಕು. ಆದರೆ ಅವರವರ ಸ್ವಭಾವ, ರುಚಿ ಇವುಗಳನ್ನನುಸರಿಸಿ ಪೂಜೆಯ ವಿಧಾನ ಭಿನ್ನವಾಗಬಹುದು.

ಪೂಜೆ ಮಾಡುವವನು ತನ್ನ ಅಂತರ್ಬಾಹ್ಯ ಶುದ್ಧಿಯನ್ನು ಕಾಪಾಡಿಕೊಂಡಿರಬೇಕು. ದೇಹ,  ಅಂತಕರಣ, ದ್ರವ್ಯ,ತತ್ವಶುದ್ಧಿಗಳನ್ನು ಇಟ್ಟುಕೊಂಡಾಗ ಪೂಜೆಯು ಫಲಕಾರಿಯಾಗುವುದು.

ದೇವಾಲಯಗಳಲ್ಲಿ ಅರ್ಚಕರು ಪೂಜೆಯನ್ನು ಮಾಡುತ್ತಾರೆ. ಅರ್ಚಕನು  ‘ಅಷ್ಟಾಂಗಯೋಗನಿಷ್ಣಾತನಾಗಿರಬೇಕು; ಎಂದು ವಿಧಿಸಿದ್ದಾರೆ. ಅಂದರೆ ಆತ್ಮಜ್ಞಾನಿಯಾಗಿದ್ದು, ಭಕ್ತರ ಮನೋಧಾರೆಯನ್ನು ಭಗವಂತನವರೆಗೆ ತಲುಪಿಸಿ ಭಕ್ತರಿಗೆ ತನ್ನ ದೃಷ್ಟಿ, ಸ್ಪರ್ಶ, ಮಾತು ಮತ್ತು ಸಂಕಲ್ಪದಿಂದ ಪ್ರಸನ್ನತೆಯನ್ನು  ಹರಿಸಬಲ್ಲವನಾಗಿರಬೇಕು. ಅದರಿಂದ ಭಕ್ತರಿಗೆ ಉತ್ತಮೋತ್ತಮವಾದ ಫಲಸಿದ್ಧಿಯಾಗುತ್ತದೆ. ಭಕ್ತರ ಅಂತರಂಗವು ಪ್ರಸನ್ನತೆಯಿಂದ ತುಂಬಿಕೊಳ್ಳುತ್ತದೆ.

ಇಂದಿನ ಪರಿಸ್ಥಿತಿ ಕೆಟ್ಟಿರಬಹುದು. ಅದನ್ನು ದೂಷಿಸುತ್ತಾ ಕೂರದೆ ಸರಿಪಡಿಸಿಕೊಂಡು ಪೂರ್ಣಲಾಭವನ್ನು ಪುನಃ ಮಾಡಿಕೊಳ್ಳುವ ಜವಾಬ್ದಾರಿ ನಮ್ಮದೇ. ಆಸ್ಪತ್ರೆಗಳಲ್ಲಿ ದೋಷಗಳಿವೆ ಎಂದು ಆಸ್ಪತ್ರೆಗಳನ್ನೇ ನಾಶಮಾಡುವುದು ಜಾಣತನವಲ್ಲ. ಅಲ್ಲವೆ?

ಭಗವದ್ಭಾವಭರಿತರಾಗಿ ಸಂಪನ್ನವಾಗುವ ಕ್ರಿಯೆಗಳೂ ಭಗವಂತನ ಪೂಜೆಯೇ ಆಗುತ್ತದೆ. ಶಂಕರರು “ಪ್ರಭೋ ನನ್ನ ಅತ್ಮಸ್ವರೂಪ ನೀನು, ನನ್ನ ಬುದ್ಧಿಯೇ ಪಾರ್ವತಿ,  ದೇಹವೇ ದೇವಾಲಯ, ಭೋಗರಚನೆಯೇ ನಿನ್ನ ಪೂಜೆ,ನಿದ್ರಾಸ್ಥಿತಿಯೇ ಸಮಾಧಿ,  ಸಂಚಾರವೆಲ್ಲವೂ  ಪ್ರದಕ್ಷಿಣೆಯಾದರೆ ನನ್ನ ಮಾತುಗಳೆಲ್ಲವೂ ನಿನ್ನ ಸ್ತೋತ್ರವೇ ಆಗಿದೆ”ಎನ್ನುತ್ತಾರೆ. ಹೀಗೆ ಅಂತಹ ಮಹಾಪುರುಷರ ಒಂದೊಂದು ಕ್ರಿಯೆಯೂ ಪೂಜೆಯೇ. ಉಳಿದ ಪೂಜಾಕ್ರಮಗಳು ಇಂತಹ ಸ್ಥಿತಿಗೆ ಏರಲು ಸೋಪಾನದಂತೆ.

ಉಪಚಾರಗಳನ್ನೆಲ್ಲಾ ಮಾನಸಿಕವಾಗಿಯೇ ಸಮರ್ಪಿಸುವುದು ಮಾನಸ ಪೂಜೆ. ಬಾಹ್ಯ ಪೂಜೆಯಲ್ಲಿ ಬಾಹ್ಯ ಸಾಮಗ್ರಿಗಳನ್ನೂ ಅರ್ಪಿಸುತ್ತೇವೆ. ಬಾಹ್ಯಪೂಜೆಯೂ ಮಾನಸ ಪೂಜೆಯಲ್ಲಿಯೇ ಪರ್ಯವಸಾನಗೊಳ್ಳಬೇಕು. ಆದರೆ ಮಾನಸಪೂಜೆ ಸುಲಭವಲ್ಲ. ಆದ್ದರಿಂದಲೇ ಬಾಹ್ಯಪೂಜೆ ಮತ್ತು ಮಾನಸಪೂಜೆಗಳೆರಡನ್ನೂ ಇಟ್ಟುಕೊಂಡಾಗ ಅದು ಜೀವ ದೇವರಿಗೆ ಸೇತುವೆಯಾಗಿ  ಸಹಕಾರಿಯಾಗುತ್ತದೆ. ಪ್ರಕೃತಿಯಲ್ಲಿರುವ ದ್ರವ್ಯಗಳು ಸಾರ್ಥಕವಾಗಬೇಕು.ಅರ್ಚಕನ ಮನಸ್ಸು ಮಾನಸ ಪೂಜೆಯಲ್ಲಿ ನಿಲ್ಲಬೇಕು.ಹಾಗೆ ಪೂಜಾವಿಧಾನವನ್ನು ಋಷಿಗಳು ಹೆಣೆದಿದ್ದಾರೆ.

ದೇವರಿಗೆ ದೀಪ ಬೆಳಗಿ ನಮಸ್ಕರಿಸಿದರೂ ಪೂಜಿಸಿದಂತೆಯೇ. ಈ ಪೂಜೆಯನ್ನು ಎಲ್ಲರೂ ಮಾಡಲೇಬೇಕು. ಅವಕಾಶವಿದ್ದಲ್ಲಿ ಪಂಚೋಪಚಾರ ಪೂಜೆ, ಷೋಡಶೋಪಚಾರ ಪೂಜೆ ಎಂದು ವಿಸ್ತರಿಸಿಕೊಳ್ಳಬಹುದು ಕೂಡ.

ದೇವರಪೂಜೆ ಋಷಿಗಳ ಅತ್ಯಮೂಲ್ಯವಾದ ಕೊಡುಗೆ. ಇಂತಹ ಪೂಜೆಯು ನಮಗೆಲ್ಲರಿಗೂ ಒಲಿಯಲಿ.

ಸೂಚನೆ:  20/07/2019 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

ಅಂತ್ಯೇಷ್ಟಿ-ಮರಣಾನಂತರದ ಸಂಸ್ಕಾರ-2 (Anthyeshti - Marananantharada samskara-2)

ಲೇಖಕರು: ತಾರೋಡಿ ಸುರೇಶ


“ಒಂದೇ ಶೃತಿಯಲ್ಲಿಟ್ಟ ಎರಡು ತಂಬೂರಿಗಳಲ್ಲಿ ಒಂದನ್ನು ಮಿಡಿದರೆ ಇನ್ನೊಂದು ಅದನ್ನೇ ಅನುರಣಿಸುತ್ತದೆಯಪ್ಪಾ” ಎಂದು ಹಾಗೆ ಮೀಟಿ ಶ್ರೀರಂಗಮಹಾಗುರುಗಳು ತೋರಿಸುತಿದ್ದರು. ಹಾಗೆಯೇ ಜೀವದ ಗತಾಗತಿಯನ್ನು ಬಲ್ಲ ಜ್ಞಾನಿಯು ತನ್ನ ಪ್ರಾಣ-ಮನಸ್ಸುಗಳನ್ನು ವಿದ್ಯುದ್ವೇಗದಲ್ಲಿ ಮೃತಜೀವದತ್ತ ಕಳುಹಿಸಿ ಅದಕ್ಕೆ ಸಂವಾದಿಯಾಗಿಸಿ ಸದ್ಗತಿಯನ್ನುಂಟುಮಾಡುತ್ತಾನೆ. ಜೀವದ ಸದ್ಗತಿಗೆ ಬೇಕಾದ ಧರ್ಮವನ್ನು ಮೃತಜೀವದಲ್ಲಿ ಸಂಕ್ರಮಣ ಮಾಡಿಸುತ್ತಾನೆ. ಕರ್ಮಗಳೂ ವಾಹಕವಾಗಿ ಸೂಕ್ತ ಧರ್ಮವನ್ನು ಉಂಟುಮಾಡುತ್ತವೆ. 

ಸದ್ಗತಿ ಎಂದರೇನು? ಜೀವಕ್ಕೆ ಪರಮಾತ್ಮದರ್ಶನವೇ ಮಹಾಧ್ಯೇಯ. ಜ್ಞಾನಿಯ ಸಂಕಲ್ಪ,ವೈಜ್ಞಾನಿಕ ಕರ್ಮಾಚರಣೆಯಿಂದ ಪರಮಾತ್ಮನನ್ನು ಸೇರಲು ಮಾದ್ಯಮವಾದ ನಾಡೀಪಥದತ್ತ ಮೃತಜೀವನು ದಾಟಿಸಲ್ಪಡುತ್ತಾನೆ. ನಾಡಿಗಳೆಂದರೆ ಬ್ರಹ್ಮಾಂಡ-ಪಿಂಡಾಂಡಗಳನ್ನು ವ್ಯಾಪಿಸಿರುವ ಜೀವಸಂಚಾರದ ಶಕ್ತಿ ಪಥಗಳು. ಅವುಗಳಲ್ಲಿ ಅಧೋಗತಿಯನ್ನುಂಟುಮಾಡುವ ನಾಡಿಗಳೂ ಇರುತ್ತವೆ.ಅವುಗಳಿಂದ ಜೀವವನ್ನು ತಪ್ಪಿಸಿ ಸನ್ಮಾರ್ಗದಲ್ಲಿ ಕರೆದೊಯ್ಯುವಂತಹ ನಾಡೀಮಾರ್ಗಗಳಲ್ಲಿ ಜೀವವನ್ನು ಜೋಡಿಸುವುದೇ ಅಂತೇಷ್ಟಿಯ ಗುರಿಯಾಗಿದೆ.

ಜೀವಿಯ ಪುಣ್ಯಪಾಪಗಳಿಗನುಗುಣವಾಗಿ ಅದಿರುವ ಸ್ತರದಿಂದ ಉತ್ತಮ ಸ್ತರಕ್ಕೆ ಅದನ್ನು ಏರಿಸಬೇಕಾಗುವುದು. ಹಾಗಾಗಿ ಆಯಾ ಜೀವಿಗಳ ಸ್ಥಿತಿಗತಿಗನುಗುಣವಾಗಿ ಅಪರಸಂಸ್ಕಾರವು ಮೃತಜೀವಕ್ಕೆ ಶುದ್ಧಿಯನ್ನು ತಂದುಕೊಡುತ್ತದೆ. ಮುಂದೆ ಮಾನವದೇಹವು ದೊರೆಯುವಂತೆಯೋ, ಅಥವಾ ಒಬ್ಬ ಸಾತ್ವಿಕನ ಮನೆಯಲ್ಲಿ ಗೋವಾಗಿಯೋ- ಆಥವಾ ಇನ್ನಾವುದೋ ಒಂದು ಒಳ್ಳೆಯ ಪರಿಸರದಲ್ಲಿ ಹುಟ್ಟುವಂತಾದರೂ ಅದೂ ಸದ್ಗತಿಯೇ. ಅದಕ್ಕೆ ಆ ಜೀವವು ದೇವನತ್ತ ಮುಖಮಾಡಿದೆ ಎಂದೇ ಅರ್ಥ.  

ಒಂದೆರಡು ಉದಾಹರಣೆಗಳು: ಒಬ್ಬನು ಮರಣೋನ್ಮುಖವಾಗುತ್ತಿರುವಾಗ ಅವನ ಬಲಗಿವಿಯಲ್ಲಿ ಭಗವಂತನನ್ನು ನೆನಪಿಸುವ ಸಾಹಿತ್ಯವನ್ನು ಹೇಳುವುದಿದೆ. ಗಂಗಾದಿತೀರ್ಥ, ತುಳಸಿ ಇತ್ಯಾದಿ ಪವಿತ್ರದ್ರವ್ಯಗಳ ಸೇವನೆ ಮಾಡಿಸುತ್ತಾರೆ. ಅವುಗಳ ಫಲವೆಂದರೆ ಜೀವಕ್ಕೆ ಊರ್ಧ್ವಗತಿ. “ಅಂತ್ಯಕಾಲದ ಸ್ಮರಣೆ ಬಹು ಪ್ರಭಾವಿಯಾದದ್ದು. ಆಗ ಆತನ ಸಪ್ತಧಾತುಗಳೂ ಒಂದು ಪಕ್ವತೆಯಲ್ಲಿರುತ್ತದೆಯಪ್ಪಾ. ಆ ಸಮಯದಲ್ಲಿನ ಭಾವನೆಗಳಿಗೆ ತಕ್ಕಂತೆ ಇವನ ಮುಂದಿನ ಗತಿ, ದೇಹ ಇತ್ಯಾದಿಗಳು ನಿರ್ಧಾರವಾಗುತ್ತದೆ.” ಎಂದು ಮಹಾಗುರುಗಳು ನುಡಿದಿದ್ದರು. ಮೃತನ ಅಂತಿಮದರ್ಶನಕ್ಕೆಂದು ಬಂಧುಮಿತ್ರರು ತಪ್ಪದೇ ಆಗಮಿಸುವುದುಂಟು. ಕೋಪ ಇತ್ಯಾದಿ ಭಾವಗಳು ಮುಖದಲ್ಲಿ ವ್ಯಕ್ತವಾಗುವಂತೆ ಜ್ಞಾನಿಯಾದವನ ಮರಣದಲ್ಲಿಯೂ ಪ್ರಾಣೋತ್ಕ್ರಮಣದ ಶ್ರೇಷ್ಠವಾದ ಗುರುತುಗಳು ಶವದ ಮೇಲೆ ಮುದ್ರಿತವಾಗಿರುತ್ತವೆ. ಅವುಗಳ ದರ್ಶನ ದರ್ಶಕರಲ್ಲಿ ಉತ್ತಮ ಸಂಸ್ಕಾರವನ್ನು ಜಾಗೃತಗೊಳಿಸುತ್ತದೆ.ಅದಕ್ಕಾಗಿ ಅಂತಿಮದರ್ಶನಕ್ಕೆ ಬರುವ ಪದ್ಧತಿಯು ಬಂದಿದೆ. ಬಂದವರಲ್ಲಿ ಜ್ಞಾನಿಗಳಿದ್ದಲ್ಲಿ ಅವರ ಆಶೀರ್ವಾದವು ಮೃತನಿಗೆ ದೊರೆಯುತ್ತದೆ. ಹೀಗೆ ಋಷಿಗಳು ರೂಪಿಸಿದ ಇಲ್ಲಿಯ ಎಲ್ಲ ಕರ್ಮಗಳೂ ಒಂದೇ ಉದ್ದೇಶದಿಂದ ಅಳವಡಿಸಲ್ಪಟ್ಟಿರುವುದನ್ನು ತೋರಿಸಿಕೊಡಬಹುದು. ಮೂರುಲೋಕದ ಸಂಚಾರದ ಪ್ರಭುತ್ವವಿದ್ದ ಋಷಿಗಳನ್ನು ಪೂರ್ವಜರನ್ನಾಗಿ ಪಡೆದ ಭಾರತೀಯರು ಅದೆಷ್ಟು ಧನ್ಯರು! ನಮಃ ಪರಮಋಷಿಭ್ಯಃ!  

ಸೂಚನೆ: 20/07/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Friday, July 19, 2019

ஶ்ரீரங்கமஹாகுரு - 12 (Sriranga Mahaguru - 12)

ஸ்ரீ குருவின் கண்ணோட்டம் - 1

ஆயுள் காப்பீடு (Life insurance)
_______________________


ஸ்ரீ சாயாபதி என்பவர் எழுதியதின் தமிழாக்கம் -- திருமதி ஜானகி


ஆயுள் காப்பீடு என்பது அனைவரும் அறிந்த ஒன்று. பல விபத்துகள் நிறைந்த இவ்வாழ்க்கையில் யாருக்கு எப்போது மரணம் நிகழும் என்பதை அறிபவர் யார்? நிச்சயமற்ற இச்சூழ்நிலையில் சிறிதளவாவது ஆறுதல் அளிப்பது ஆயுள் காப்பீடு. எதிர்பாராது மரணத்தை தழுவும் நபரின் குடும்பத்திற்கு ஓரளவு நிதியுதவி வழங்கும் திட்டம் இது.

            இது சிறந்ததாலும் உயிர் துறந்த அந்த ஜீவனுக்கு இதனால் ஏற்படும்  லாபம் தான் என்ன? அந்த ஜீவன் இதனால் எவ்வாறு நிம்மதி அடைய முடியும்? அதன் நிம்மதிக்கும் சுகத்திற்கும் எவ்விதத்திலும் உபயோகமற்ற இத்திட்டம் ஆயுள் காப்பீடு எவ்வாறாகும்?

            அந்த ஜீவனுக்கு உயிருடனோ அல்லது உயிர் நீத்த பிறகோ நிம்மதியை தரும் காப்பீடு ஏதாவது உள்ளதா?  ஜீவத்திற்கு நிம்மதி அளிக்கும் இத்தகைய  காப்பீடு எவ்வாறு சாத்தியம்? ஆயுள் காப்பீடு எனும் சொல்லின் ரகசியத்தை உணர்ந்து இப்புதிருக்கு பொருத்தமான விளக்கத்தை அளித்தவர் ஶ்ரீரங்கமஹாகுரு.

            உலகவழக்கிலுள்ள காப்பீடு தேகத்தையும் குடும்பத்தையும் காப்பதற்கு உதவுகிறது. ஆனால் ஜீவனுக்கு உடலில் உள்ள போது நிம்மதியை அளிப்பது மட்டுமின்றி,  உடலிலிருந்து பிறிந்த பிறகும் தன்னுடைய உதவியினால் நிம்மதியளிக்கும் ஒரு செல்வம் உண்டு. அதுவே ஞானம் எனும் செல்வம். தேகத்தினுள் ஒரு மையத்தில் விளங்கும் ஓர் பேரொளி. அங்கே அதை காண்பவர்க்கு பேரானந்த அமுதமளிக்கும் ஆனந்த நிலை. உயிர் உள்ள போதே அதை அடையும் வழிமுறைகளை அறிந்த ஞானிகளின்  வழிகாட்டுதலினால் அச்செல்வத்தை  அடையலாம். அவ்வாறு அதை ஒறுமுறை அடைந்த பின் உயிர் பிரிந்தாலும் ஜீவன் அப்பேரொளியின் மடியிலேயே நிம்மதி காணுமாறு தன்னிடம் கவர்ந்திழுக்கும் பெரும் செல்வம் அது. அச்செல்வத்தை பெறுவதற்கென்றே காப்பீடு செய்வதானால் அதுவே உண்மையான அர்த்தத்தில் காப்பீடாகும். அப்பெரும் செல்வத்தை தான் அடைந்து பிறர்க்கும் அந்நிலையை காண்பிக்கவல்ல நேர்மையான ஓர் சத்குருவினிடம் அடைக்கலம் பெற்றால்தான் அது ஜீவனுக்கு உண்மையான காப்பீடாகும்.

(அடுத்த வியாழனன்று தொடரும்)

ನಿತ್ಯ ಬ್ರಹ್ಮಚಾರಿ, ನಿತ್ಯ ಉಪವಾಸಿ. (Nithya brahmachari, nithya upavasi)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ


ಯಮುನಾ ನದಿಯ ಆಚೆಯ ತೀರದಲ್ಲಿ ದುರ್ವಾಸರರು ಶಿಷ್ಯರ ಸಹಿತ ಬಿಡಾರ ಹೂಡಿದ್ದರು. ಈಚೆಯ ಗೋಕುಲದಲ್ಲಿದ್ದ ಶ್ರೀ ಕೃಷ್ಣನಿಗೆ ವಿಷಯ ತಿಳಿಯಿತು. ಶ್ರೀ ಕೃಷ್ಣನು ಗೋಪಿಕೆಯರನ್ನು ಕರೆದು, ದುರ್ವಾಸರಿಗೆ ಊಟೋಪಚಾರಗಳನ್ನು ಸಮರ್ಪಿಸಿಬರಬೇಕೆಂದು ಆಜ್ಞಾಪಿಸಿದನು. ಸರಿ. ಆದರೆ ತುಂಬಿ ಹರಿಯುತ್ತಿರುವ ಯಮುನೆಯನ್ನು ದಾಟಿ ಹೋಗುವುದಾದರೂ ಹೇಗೆ ಎಂದು ಅವರು ಕೃಷ್ಣನನ್ನೇ ಕೇಳಿದರು. ಆಗ ಶ್ರೀ ಕೃಷ್ಣನು - “ನಿತ್ಯ ಬ್ರಹ್ಮಚಾರಿಯಾದ ಕೃಷ್ಣನು ಹೇಳಿದ್ದಾನೆ, ದಾರಿ ಬಿಡಬೇಕು“  ಎಂದು ಯಮುನೆಯನ್ನು ಪ್ರಾರ್ಥಿಸಲು ಹೇಳಿದ. ಗೋಪಿಕೆಯರಿಗೆ ಆಶ್ಚರ್ಯ. ಸಾಲದೆಂಬಂತೆ ಯಮುನೆಯೂ ಅವರು ಆಚೆಯ ದಡ ಸೇರುವವರೆಗೂ ದಾರಿ ಬಿಟ್ಟಳು. ಅಲ್ಲಿ ಇವರು ತೆಗೆದುಕೊಂಡು ಹೋಗಿದ್ದ ಭಕ್ಷ್ಯ ಭೋಜ್ಯ ಸಹಿತವಾದ ಭೋಜನವನ್ನು ದುರ್ವಾಸರಿಗೆ ಮತ್ತು ಅವರ ಶಿಷ್ಯರಿಗೆಲ್ಲ ಪುಷ್ಕಳವಾಗಿ ಬಡಿಸಿದರು. ನಂತರ ಮತ್ತೆ ಯಮುನಾ ನದಿಯನ್ನು ದಾಟುವುದು ಹೇಗೆಂದು ದುರ್ವಾಸರನ್ನೇ ಕೇಳಿದರು. ಆಗ ದುರ್ವಾಸರು-“ ನಿತ್ಯ ಉಪವಾಸಿಯಾದ ದುರ್ವಾಸನು ಹೇಳಿದ್ದಾನೆ, ದಾರಿ ಬಿಡಬೇಕು ಎಂದು ಯಮುನೆಯನ್ನು ಪ್ರಾರ್ಥಿಸಿ” ಎಂದರು. ಗೋಪಿಕೆಯರಿಗೆ ಆಶ್ಚರ್ಯವೋ ಆಶ್ಚರ್ಯ. ಯಮುನೆಯು ಈ ಬಾರಿಯೂ ದಾರಿ ಬಿಟ್ಟಳು. ಇದೇನಿದು, ನಿತ್ಯವೂ ನಮ್ಮೊಡನೆ ವಿಹರಿಸುವ ಕೃಷ್ಣನು ನಿತ್ಯ ಬ್ರಹ್ಮಚಾರಿ ಹೇಗಾದಾನು? ಹಾಗೆಯೇ ನಮ್ಮೆದುರಿಗೇ ಪುಷ್ಕಳವಾದ ಭೋಜನವನ್ನು ಸ್ವೀಕರಿಸಿದ ದುರ್ವಾಸರು ನಿತ್ಯ ಉಪವಾಸಿ ಹೇಗಾದಾರು? ಎಂಬುದಾಗಿ ಕಾಡಿದ ಪ್ರಶ್ನೆಯನ್ನು ಶ್ರೀ ಕೃಷ್ಣನನ್ನೇ ಕೇಳಿದರು. ಶ್ರೀ ಕೃಷ್ಣನ ಅದ್ಭುತವಾದ ಉತ್ತರವನ್ನು ಕೇಳಿ-“ ನಾನು ನಿಮ್ಮೆಲ್ಲರ ಜೊತೆಗಿದ್ದರೂ ಅರೆ ಕ್ಷಣವೂ ಬ್ರಹ್ಮ ಭಾವವನ್ನು ಬಿಟ್ಟಿಲ್ಲ. ಸದಾ ಬ್ರಹ್ಮನಲ್ಲೇ ಸಂಚರಿಸುವವನು. ಹಾಗಾಗಿ ನಿತ್ಯ ಬ್ರಹ್ಮಚಾರಿ. ದುರ್ವಾಸರು ನಿತ್ಯದಲ್ಲೂ ಭಗವಂತನ ಬಳಿಯಲ್ಲೇ ವಾಸ ಮಾಡುವವರು. ಉಪ-ಹತ್ತಿರದಲ್ಲಿ ವಾಸ. ಮಾತ್ರವಲ್ಲ ತಾನು ಸ್ವೀಕರಿಸುವ ಒಂದೊಂದು ತುತ್ತನ್ನೂ ಕೃಷ್ಣಾರ್ಪಣ ಭಾವದಿಂದಲೇ ಸ್ವೀಕರಿಸುತ್ತಾರೆ. ಹಾಗೆಂದೇ ಅವರು ನಿತ್ಯ ಉಪವಾಸಿ. ಎರಡೂ ಸರಿಯಾಗಿರುವುದರಿಂದಲೇ ಯಮುನೆಯು ನಮ್ಮ ಮಾತುಗಳನ್ನು ಗೌರವಿಸಿ ದಾರಿ ಬಿಟ್ಟಳು”

“ ಮೌಲಿಸ್ಥ ಕುಂಭ ಪರಿರಕ್ಷಣ ಧೀರ್ನಟೀವಾ.....” – ಎಂಬ ಶ್ರೀ ಶಂಕರರ ಮಾತಿನಂತೆ-ನಿಪುಣೆಯಾದ ನರ್ತಕಿಯೊಬ್ಬಳು ಕುಂಭವನ್ನು ತಲೆಯಮೇಲೆ ಧರಿಸಿ ನಾನಾ ಹಾವ ಭಾವಗಳಿಂದ ನರ್ತನ ಮಾಡುತ್ತಿದ್ದರೂ ಆ ಕುಂಭವು ಕೆಳಗೆ ಬೀಳದಂತೆ ಜಾಗ್ರತೆ ವಹಿಸುತ್ತಾಳೆ. ಹಾಗೆಯೇ ನಮ್ಮ ಜೀವನದಲ್ಲಿ ಯಾವ ಕೆಲಸಗಳನ್ನು ಮಾಡುತ್ತಿದ್ದರೂ ನಮ್ಮ ಜೀವನ ಮೂಲನಾದ ಭಗವಂತನನ್ನೂ ಅವನ ಆಶಯವನ್ನೂ ತಲೆಯ ಮೇಲೆ ಧರಿಸಿಯೇ ಎಲ್ಲವನ್ನೂ ನಿರ್ವಹಿಸಲು ಕಲಿತೆವಾದರೆ ಜೀವನ ಸಾರ್ಥಕ. ಮೇಲಿನ ಮಹಾತ್ಮರ ಕಥೆಯ ಆದರ್ಶವೂ ಇದೇ ಆಗಿದೆ. ನಮಗೆ ಕೃಷ್ಣನ ಜಗದ್ವಂದ್ಯವಾದ ವ್ಯಕ್ತಿತ್ವದ ಪರಿಚಯವಿಲ್ಲದೇ ಅವನ ಹೊರ ಜೀವನದ ಆಚರಣೆಗಳ ಮೇಲೆ ಅವನನ್ನು ಅಳೆದುಬಿಡುತ್ತೇವೆ. ಹಾಗೆಯೇ ದುರ್ವಾಸರಂತಹ ಮಹಾತ್ಮರನ್ನೂ ಸಹ. ಬ್ರಹ್ಮವೇ ಲೋಕೋದ್ಧಾರಕ್ಕಾಗಿ ಇಳೆಗಿಳಿದು ಬಂದು ಕೃಷ್ಣರೂಪಿಯಾಗಿದ್ದಾನೆ ಎಂಬುದನ್ನು ಅವನ ಕಾಲದಲ್ಲಿಯೇ ಅರ್ಥ ಮಾಡಿಕೊಂಡವರು ಬೆರಳೆಣಿಕೆಯಷ್ಟು ಜನ. ಶ್ರೀರಂಗ ಮಹಾಗುರುಗಳ ಈ ಮಾತು ಇಲ್ಲಿ ಸ್ಮರಣೀಯ-  'ಸಂಸಾರಕ್ಕೆ ಬಿದ್ದಿರುವ ನಮ್ಮನ್ನು ಮೇಲೆತ್ತಲು ಭಗವಂತನೂ ಸಂಸಾರಕ್ಕೆ ಇಳಿದಿದ್ದಾನೆ ಎಂಬುದನ್ನು ನಾವು ಅರಿಯುವುದಿಲ್ಲ'  ಮಹಾತ್ಮರ ಮಾಹಾತ್ಮೆಯನ್ನು ಅರಿಯಲು ಆ ದಿಕ್ಕಿನಲ್ಲಿ ನಮ್ಮ ಸಾಧನೆಇರಬೇಕು. ಜ್ಞಾನೀ ಜನರ ಮಾರ್ಗದರ್ಶನ ಬೇಕು. ಅಂತಹ ಅವಕಾಶಗಳು ನಮ್ಮೆಲ್ಲರಿಗೂ ಒದಗಿಬರಲಿ ಎಂದು ಪ್ರಾರ್ಥಿಸೋಣ.  


ಸೂಚನೆ:  19/07/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

Thursday, July 18, 2019

ஶ்ரீரங்கமஹாகுரு - 27 (Srirangamahaguru - 27)

ஶ்ரீகுருவின் கண்ணோட்டம் – 16
(மூலம்: திரு. வரததேசிகாசார்யார் தமிழாக்கம் : திருமதி ஜானகி)


பெரியவனுக்கு சிறிய உறைவிடம் ஏன்?

        இறைவனுக்கென்றே உருவாக்கப்பட்ட ஆலயத்தில் மற்றெல்லா  இடங்களும்  விரிந்து பரந்திருந்தாலும், ஆண்டவன்  உறையும் கருவறையே மிகவும் சிறிது. அங்கு ஒளிர்விடும் சிறிய தீபத்தை தவிர வேறு வெளிச்சத்திற்கு வழியில்லை. தற்போதைய மின்சார விளக்குகளை பயன்படுத்துவதற்கு  பாரம்பர்யத்தில் ஊறியவர்கள் விரோதம் தெரிவிப்பதையும் கேள்விப்படுகிறோம்.

         அனைவரும் இறைவனை காண ஆவலுடன் ஓடிவரும் அறையே ஏன் சிறியது? அது விசாலமாகவும் இருந்து அதிகஒளியும் புகுந்தால் நலந்தானே? ஏன் இருட்டு குகையில் மிளிரும் தீபத்தைப்போன்றதோர்  சிறிய தீபம்  ஒளிரவேண்டும்? அதற்கு ‘கருவறை’ எனும் பெயர்தான் ஏன்? எனும் வினாக்கள் எழுவது இயல்பு.

          ஓர் ஜீவனின் உற்பத்தி ஏற்படுவது தாயின் கருவறையில் என்பதை நாம் மறக்கக்கூடாது. "தாயின் கர்ப்பத்தில் இருக்கும்பொழுது குழந்தை தன் எட்டாவது மாதத்தில் இறைவனை தரிசிக்கிறது.  அக்காட்சியை கண்டு பேரானந்தத்தில் திளைக்கும் அந்த ஜீவன் தான் கர்ப்பத்திலிருந்து வெளியே வந்த பிறகு அஜ்ஜோதியை மறவாமல் வாழ்வதாக உறுதி கொள்கிறது" என்று ஞானிகள் கூறுகின்றனர். ஆயினும் தாயின் கருவறையிலிருந்து வெளிவந்த பிறகு சிசு வெளி உலகத்தின் ஈர்ப்புக்கு உட்பட்டு தன் உறுதி மொழியை மறந்துவிடுகிறது.

         மீண்டும் அந்த ஜீவனுக்கு கருவறையில் கண்ட அச்சோதியை நினைவூட்டி அதன் வாழ்வில் பேரானந்தத்தையும், பரம சாந்தியையும் வழங்குவதே ஆலய நிர்மாணத்தின் பின் அடங்கியுள்ள  திட்டம். ஆகவேதான் ஆண்டவனை நிலைநிறுத்தும் இடத்திற்கும் ’கருவறை’ எனும் பெயர் வழங்கிவருகிறது. ஜீவன் முதன்முதலில் இறைவனை கண்ட இடம். அங்கு வெளியிலிருந்து எந்த ஒளியும் நுழைய முடியாததால் அது வெளி ஒளியிலிருந்து தனிப்படுத்தி  அமைக்கப்பட்டுள்ளது. அங்கு கண்ட ஜோதியின் நினைவிற்காக சிறு தீபம்; மற்றும் அந்த ஞானத்தினிடம் நம்மை ஈர்க்கும் அடையாளங்களை கொண்ட  இறைஉருவம். அவ்வாறே கருப்பை சிறிதாகவும், மறைந்தும் இருப்பதால் கருவறையும் சிறியது. ஜீவன் முதன் முதலில் ஜோதியை கண்ட இடம் கருப்பை என்பதால் ஜீவனை அச்சூழ்நிலைக்கே கொண்டு சென்று மீண்டும் அத்தரிசனத்தை  காட்டுவதற்காகவே  ஆலயத்திலும் ஒரு கருவறை அல்லது கர்ப்பக்ருஹம்.

Tuesday, July 16, 2019

ಉಪದೇಶ ಏಕೆ ಬೇಕು? (Upadesha eke beku?)

ಲೇಖಕರು: ರಾಜಗೋಪಾಲನ್. ಕೆ .ಎಸ್.  


ವಿದೇಶೀಯನೊಬ್ಬ ಭಾರತದ ಕಾಶೀ ಕ್ಷೇತ್ರಕ್ಕೆ ಬಂದ. ಉದ್ದ ಗಡ್ಡದ ಆಸಾಮಿ ಅವನು. ದಾರಿಯಲ್ಲಿ ಒಂದು ಅಂಗಡಿಯಲ್ಲಿ ಹಲಸಿನ ಹಣ್ಣಿನ ವ್ಯಾಪಾರವಾಗುತ್ತಿರುವುದನ್ನು ನೋಡಿದ. ಕೊಯ್ದ ಹಣ್ಣುಗಳನ್ನು ಅನೇಕರು ಕೊಂಡುಕೊಳ್ಳುತ್ತಿದ್ದರು. ಅದರ ಮೇಲೆ ಧೂಳು ಕುಳಿತುಕೊಳ್ಳಬಾರದೆಂಬ ದೃಷ್ಟಿಯಿಂದ ಆ ಕೊಯ್ದ ಭಾಗಗಳನ್ನು ಎಲೆಗಳಿಂದ ಮುಚ್ಚಿ ಕೊಡುತ್ತಿದ್ದರು. ಹಲಸಿನ ಹಣ್ಣನ್ನು ಕೊಯ್ಯುವಾಗ ಬರುವ ಹಾಲನ್ನು ರಕ್ಷಿಸಲು ಎಲೆ ಮುಚ್ಚಿ ಕೊಡುತ್ತಿದ್ದಾರೆಂದು ಈತ ಭಾವಿಸಿದ. ಒಂದು ಪೂರ್ತಿ ಹಣ್ಣನ್ನು ಕೊಂಡುಕೊಂಡ. ಆದರೆ, ಅದನ್ನು ತಿನ್ನುವ ಕ್ರಮವನ್ನು ತಿಳಿದುಕೊಳ್ಳಲಿಲ್ಲ. ಹಾಗೆಯೇ, ಕಚ್ಚಿ ತಿನ್ನಲು ಹೋದಾಗ, ಮುಳ್ಳು ಚುಚ್ಚಿತು. ಅದನ್ನು ಬಿಟ್ಟು, ಮುಳ್ಳು ಇಲ್ಲದ ತೊಟ್ಟಿನ ಬಳಿ ಕಚ್ಚಿ ತಿನ್ನಲು ಪ್ರಯತ್ನ ಪಟ್ಟಾಗ, ಅಲ್ಲಿಂದ ಧಾರಾಕಾರವಾಗಿ ಹಾಲು ಬರತೊಡಗಿತು. ಹಾಲೇ ಈ ಹಣ್ಣಿನ ಸಾರವೆಂದು ಭಾವಿಸಿದ ಆತ ಹಣ್ಣನ್ನು ಎತ್ತಿ, ಹಾಲು ಕುಡಿಯಲು ಪ್ರಾರಂಭಿಸಿದ. ಹಾಲು ಅವನ ಗಡ್ಡಕ್ಕೆ ಅಂಟಿಕೊಂಡು ಗಡ್ಡವೆಲ್ಲ ಬತ್ತಿಯಾಗಲು ತೊಡಗಿತು. ಅದನ್ನು ತೊಳೆದುಕೊಳ್ಳುವ ಬಗೆ ತಿಳಿಯದ ಆತ ಫಜೀತಿಯಿಂದ ಪಾರಾಗಲು ಕ್ಷೌರ ಮಾಡಿಸಿಕೊಂಡುಬಿಟ್ಟ. ಹಾಗೆಯೇ ಬರುತ್ತಿರುವಾಗ, ಕ್ಷೌರ ಮಾಡಿಸಿಕೊಂಡ ಕೆಲವರು ಎದುರಿಗೆ ಸಿಕ್ಕಿದರು. ಈತ ಅವರನ್ನು ನೋಡಿ, “ಏನು! ನೀವೂ ಸಹ ಹಲಸಿನ ಹಣ್ಣನ್ನು ತಿಂದಿರಾ?” ಎಂದು ಕೇಳಿದ. ಅವರಲ್ಲಿ, ನಿಜವಾಗಿ ಹಲಸಿನ ಹಣ್ಣನ್ನು ತಿಂದವರೂ ಇದ್ದರು. ಅವರಿಗೆ ಇವನ ಪ್ರಶ್ನೆ ಆಶ್ಚರ್ಯವನ್ನುಂಟು ಮಾಡಿತು. “ ನಾವು ಹಲಸಿನ ಹಣ್ಣನ್ನು ತಿಂದಿದ್ದು ನಿಮಗೆ ಹೇಗೆ ಗೊತ್ತಾಯಿತು?” ಎಂದು ಇವನನ್ನು ಕೇಳಿದರು. ಇವನು “ನಾನೂ ನಿಮ್ಮ ಹಾಗೆಯೇ ಹಲಸಿನ ಹಣ್ಣನ್ನು ತಿಂದು ಈಗ ತಾನೇ ಕ್ಷೌರ ಮಾಡಿಸಿಕೊಂಡು ಬಂದೆ. ಆದ್ದರಿಂದಲೇ ನನಗೆ ಗೊತ್ತಾಗಿದ್ದು” ಎಂದ. ಅವರಿಗೆ ಇನ್ನೂ ಆಶ್ಚರ್ಯವಾಗಿ, “ಇದೇನು! ಹಲಸಿನ ಹಣ್ಣನ್ನು ತಿಂದರೆ ಕ್ಷೌರ ಮಾಡಿಸಿಕೊಳ್ಳಬೇಕೆ?” ಎಂದು ಮತ್ತೆ ಕೇಳಿದಾಗ, ಈತ ತಾನು ಹಣ್ಣನ್ನು ತಿಂದ ಕ್ರಮವನ್ನು ಹೇಳಿದ. ಆಗ ಅವರು ನಕ್ಕು, ಹಲಸಿನ ಹಣ್ಣನ್ನು ತಿನ್ನುವ ಬಗೆಯನ್ನು ತೋರಿಸಿಕೊಟ್ಟರು.

ಉಪದೇಶದ ಮಹತ್ವವನ್ನು ಮನದಟ್ಟುಮಾಡಿಕೊಡಲು ಈ ಕಥೆಯನ್ನು ಹೇಳಿ ಶ್ರೀರಂಗಮಹಾಗುರುಗಳು ಒಂದು ನೀತಿಯ ಪಾಠವನ್ನು ಕೊಟ್ಟಿದ್ದರು- “ಯಾವ ಪದಾರ್ಥವನ್ನೇ ಆಗಲಿ, ಉಪಯೋಗಿಸುವ ಮುನ್ನ ಅದನ್ನು ತಂದವರ ಅಥವಾ ಅನುಭವಿಗಳ ಮೂಲಕ ಸರಿಯಾಗಿ ಉಪದೇಶವನ್ನು ಪಡೆದು ನಂತರ ಅದನ್ನು ಉಪಯೋಗಿಸಿಕೊಳ್ಳಬೇಕು”. ಇಂದು, ನಮ್ಮ ಆರ್ಷಸಾಹಿತ್ಯ, ಕೆಲ ವಿದೇಶೀಯರ ಕೈಗೆ ಸಿಕ್ಕಾಗ ಮತ್ತು ಅಂತಹ ವಿದೇಶೀಯರ ಮಾನಸಪುತ್ರರಾದ ಕೆಲವು ಭಾರತೀಯರಿಂದಾಗಿ, ಅಪಾರ್ಥಕ್ಕೆ, ವ್ಯಂಗ್ಯಕ್ಕೆ ಈಡಾಗಿದೆ. ಇಂತಹ ಸಾಹಿತ್ಯವನ್ನು ಅರ್ಥಮಾಡಿಕೊಳ್ಳಲು, ಸಾಹಿತ್ಯವನ್ನು ಕೊಟ್ಟವರ ಮನೋಭೂಮಿಕೆಗೇ ನಾವು ಹೋಗಬೇಕಾಗುವುದು ಅನಿವಾರ್ಯ. ನಮ್ಮ ಪರಂಪರೆಯಲ್ಲಿ ಈ ಕಾರಣದಿಂದಲೇ ಉಪದೇಶವಿಲ್ಲದೆ ಇಂತಹ ಸಾಹಿತ್ಯವನ್ನು ಓದುವುದು ರೂಢಿಯಲ್ಲಿರಲಿಲ್ಲ. ಕಾಲಕ್ರಮದಲ್ಲಿ ಅಂತಹ ಪದ್ಧತಿ ಮರೆಯಾಗಿದೆ. ಋಷಿಗಳ ಮನೋಧರ್ಮವನ್ನು ಹಿಡಿದು ಅದನ್ನು ಉಪದೇಶಿಸಬಲ್ಲವರನ್ನು ಹುಡುಕಿ, ಅವರ ಮಾರ್ಗದರ್ಶನದಿಂದ ನಮ್ಮ ಬಾಳನ್ನು ಹಸನು ಮಾಡಿಕೊಳ್ಳೋಣ. 

ಸೂಚನೆ:  15/07/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

का कन्या (Kaa kanyaa)

लेखकः – विद्वान् नरसिंह भट्टः   
 
आबहोः कालात् भारतीया संस्कृतिः जगति विशिष्टस्थानापन्ना अस्ति । तत्र च कारणं प्रकृतिः । “ द्विधा कृत्वा आत्मनो देहम् अर्धेन पुरुषोऽभवत् अर्धेन नारी” इति मनुस्मृतौ प्रकृतेः प्राधान्यं वर्णयति । पुरुषः स्वचैतन्यं प्रकृतिद्वारा प्रकटयति । अतः अस्माकं परम्परापि प्रकृतेः चेतनदायित्वं प्रतिपादयति । सा च प्रकृतिः प्रथमतया ‘कन्या’ इति व्यपदिश्यते । एवं च कन्यायाः स्वरूपं स्वभावः कार्यक्षेत्रं च अस्माभिः अनुसन्धानीयम् ।

‘कन् दीप्तौ’ इति धातोः ‘यक्’ इति उणादिप्रत्यययोगेन निष्पन्नस्य कन्याशब्दस्य ‘कुमारी’ इत्यर्थः । ‘कन्यायाः कनीन च’ इति पाणिनिसूत्रप्रकारेण न ङीष् प्रत्ययः अपि तु टाप् । कन्याशब्दः द्वादशराशिष्वन्यतमा एका महौषधिः सुता इत्याद्यर्थेषु परिदृश्यते । प्रधानतया दीप्तिमती इत्यर्थः स्वीक्रियते सर्वत्र । अत एव अस्माभिः श्रद्धालुभिः प्रातरुत्थाय अयं श्लोकः पठ्यते यत् “ अहल्या द्रौपदी सीता तारा मन्दोदरी तथा । पञ्चकन्याः स्मरेन्नित्यं महापातकनाशनम् ॥“ इति । एतादृशाः कन्याः अस्माकम् आदर्शाः । किमर्थम् एताः कन्याः प्रातस्मरणीयाः इत्यत्र अष्टाङ्गयोगविज्ञानमन्दिरस्य श्रीरङ्गमहागुरवः प्रतिपादयन्ति स्म यत् “प्रायः विवाहात् परं स्त्रीणां विशिष्टा दीप्तिः प्रणश्यति । परन्तु अहल्यादीनां स्त्रीणां विवाहात्परमपि दीप्तिः तथैव भवति । एतदेव वैशिष्ट्यम् एतासाम् अहल्यादीनाम् । यदा आत्मदीप्तिं प्रति आकर्षन्ति तदा ताः कन्याः प्रातस्मरणीयाः भवन्ति” इति । अत एव भारतीयपरम्परायाम् अनुपमत्वं कन्यायाः अस्तीति न विविदिषन्ति विबुधाः ।

भारतीयानां विवाहसन्दर्भे अयम् अंशः स्पष्टीभविष्यति यत् तत्र कन्यापिता एवं सङ्कल्पयति “ लक्ष्मीरूपाम् इमां कन्यां श्रीधररूपिणे वराय प्रदास्यामि” इति । कन्यायां लक्ष्मीं पार्वतीं वाणीं वा भावयन्ति । अपि च यत्र स्त्रीणां विषये समाजस्य गौरवं भवति तत्र देवा अपि नृत्यन्ति । अतः तासां प्रथमोपस्थापनं सर्वत्र भवति तथाहि- मातृदेवो भव । लक्ष्मीनारायणाभ्यां नमः उमामहेश्वराभ्यां नमः वाणीविधातृभ्यां नमः अरुन्धतीवसिष्ठाभ्यां नमः इत्यादि रूपेण । एवं च कन्यायाः कान्तिमत्वात् आत्मदीप्तिकर्षणत्वादिगुणगणत्वात् च महत्वं जगति प्रसारयामः ।